Advertisement

ಸಾಗರತೀರದಲ್ಲಿ 5 ಸಾವಿರ ಕೋ.ರೂ. ವಿವಿಧ ಯೋಜನೆ: ಕಪಿಲ್‌ಮೋಹನ್‌

02:03 AM Apr 06, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳ ಒಟ್ಟು 320 ಕಿ.ಮೀ. ಸಾಗರತೀರದಲ್ಲಿ ಸಮಗ್ರ ಅಭಿವೃದ್ಧಿಗೆ ಸುಮಾರು 5 ಕೋ.ರೂ. ವೆಚ್ಚದ ವಿವಿಧ ಯೋಜನೆಗಳು ಅನುಷ್ಠಾನದಲ್ಲಿವೆ ಎಂದು ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಸಿಇಒ ಕಪಿಲ್‌ಮೋಹನ್‌ ಹೇಳಿದರು.

Advertisement

ಕಾರವಾರ, ಭಟ್ಕಳ, ಹೊನ್ನಾವರ, ಮಾವಿನಕುರ್ವೆ, ತದಡಿ,ಬೈಂದೂರು, ಮಲ್ಪೆ, ಮಂಗಳೂರು ಹಳೇ ಬಂದರು ಸೇರಿದಂತೆ ಮಧ್ಯಮ ಮತ್ತು ಕಿರು ಬಂದರುಗಳ ಅಭಿವೃದ್ಧಿಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಕರಾವಳಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗು ತ್ತಿದೆ. ಮಂಗಳೂರಿನ ಹಳೆ ಬಂದರನ್ನು ಸಾರಿಗೆ ಕೇಂದ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಲಕ್ಷದ್ವೀಪಕ್ಕೆ ಸರಕು ಸಾಗಾಟ ನೌಕೆಗಳು, ಪ್ರವಾಸಿಗರ ಸಂಚಾರ ನೌಕೆಗಳ ಆಗಮನ, ನಿರ್ಗಮನಕ್ಕೆ ಅನುಕೂಲವಾಗಲಿದೆ ಎಂದು ಮಂಗಳೂರಿನಲ್ಲಿ ಮಂಗಳವಾರ ಜರಗಿದ 59ನೇ ರಾಷ್ಟ್ರೀಯ ಮೆರಿಟೈಮ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.

ಡಾ| ಕೆ.ವಿ. ರಾಜೇಂದ್ರ, ಕಸ್ಟಮ್ಸ್‌ನ ಮಂಗಳೂರು ಆಯುಕ್ತ ಇಮಾಮುದ್ದೀನ್‌ ಅಹಮದ್‌ ಮಾತನಾಡಿದರು.

ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಸದಸ್ಯ ಕ್ಯಾ| ಸಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಗೊಲಿಂಕ್ಸ್‌ ಮಂಗಳೂರು ಇದರ ಆಡಳಿತ ಪಾಲುದಾರ ಜೀತನ್‌ ಸಿಕ್ವೇರಾ, ಬಂದರು ಅಧಿಕಾರಿ ಬೋಧಿರಾಜ್‌, ಅರುಣ್‌ ಗಾಂವ್ಕರ್‌, ಮಂಗಳೂರು ಬಂದರು ಕಚೇರಿ ಸ. ಆಡಳಿತಾಧಿಕಾರಿ ನಿರಂಜನ ಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next