Advertisement

Wheelchair Cricket: ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಕರ್ನಾಟಕ ತಂಡದ ನಾಯಕನಾಗಿ ಮಹೇಶ್ ಆಯ್ಕೆ

05:13 PM Sep 20, 2023 | Team Udayavani |

ವಿಜಯಪುರ: ತಮಿಳುನಾಡಿನ ಚೆನ್ನೈನಲ್ಲಿ ಸೆ.22 ರಿಂದ ಆರಂಭಗೊಳ್ಳಲಿರುವ ರಾಷ್ಟ್ರ ಮಟ್ಟದ ಗಾಲಿ ಕುರ್ಚಿ ಕ್ರಿಕೆಟ್ ಪಂದ್ಯಾಗಳಿಗೆ ಕರ್ನಾಟಕ ರಾಜ್ಯ ತಂಡದ ನಾಯಕರಾಗಿ ವಿಜಯಪುರ ಜಿಲ್ಲೆಯ ಮಹೇಶ ತೋಟದ ಆಯ್ಕೆಯಾಗಿದ್ದಾರೆ.

Advertisement

ಸೆ.24 ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ಗಾಲಿ ಕುರ್ಚಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ದೇಶ 6 ರಾಜ್ಯಗಳ ತಂಡಗಳು ಪಾಲ್ಗೊಳ್ಳಲಿದ್ದು, ವಿಜಯಪುರ ಜಿಲ್ಲೆಯ ಮಹೇಶ ತೋಟದ ಕರ್ನಾಟಕ ವ್ಹಿಲ್‍ಚೇರ ತಂಡಕ್ಕೆ  ನಾಯಕರಾಗಿ ಆಯ್ಕೆಯಾಗಿದ್ದಾರೆ.

ಬಸವನಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜವಳಿ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮನಗೂಳಿಯ ಅಪ್ಪುಗೌಡ ಪಾಟೀಲ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಜಶೇಖರ ಪೈವಾಡಿ, ಪ್ರಶಾಂತ ದೇಶಪಾಂಡೆ ಸೇರಿದಂತೆ ಇತರರು ಮಹೇಶ ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೇ ನಾಯಕತ್ವದಲ್ಲಿ ರಾಜ್ಯ ತಂಡ ಚಾಂಪೀಯನ್ ತಂಡವಾಗಿ ಹೊರ ಹೊಮ್ಮಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ : Rambo Circus ; ಮಂಗಳೂರಿನಲ್ಲಿ ನಾಳೆಯಿಂದ ಆರಂಭ: ಬೆರಗುಗೊಳಿಸುವ ಪ್ರದರ್ಶನ

Advertisement

Udayavani is now on Telegram. Click here to join our channel and stay updated with the latest news.

Next