Advertisement

ಅಧಿಕಾರಿ ಜತೆ ಡಿವಿಎಸ್‌ ಚರ್ಚೆ ಫ‌ಲ : ಕಬಡ್ಡಿ ಆಟಗಾರ ಪ್ರತಾಪ್‌ಗೆ ಅವಕಾಶ ನೀಡಲು ಸಮ್ಮತಿ

11:47 AM Oct 07, 2020 | sudhir |

ಪುತ್ತೂರು: ಭಾರತ ಕಬಡ್ಡಿ ತಂಡದ ಹಿರಿಯರ ವಿಭಾಗದ ಸಂಭಾವ್ಯ ಆಟಗಾರರ ಯಾದಿಯಲ್ಲಿ ರಾಜ್ಯದ ಏಕೈಕ ಕಬಡ್ಡಿ ಆಟಗಾರನಾಗಿ ಆಯ್ಕೆಯಾಗಿ ಮೊದಲನೇ ಹಂತದ ಆನ್‌ಲೈನ್‌ ತರಬೇತಿ ಶಿಬಿರದಿಂದ ಕೈಬಿಡಲಾಗಿದ್ದ ಸುಳ್ಯದ ಸಚಿನ್‌ ಪ್ರತಾಪ್‌ ಅವರಿಗೆ ಎರಡನೇ ಹಂತದ ತರಬೇತಿ ಶಿಬಿರದಲ್ಲಿ ಅವಕಾಶ ಕಲ್ಪಿಸಲು ದಿಲ್ಲಿ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಶನ್‌ ಅಧಿಕಾರಿಗಳು ಸಮ್ಮತಿಸಿದ್ದಾರೆ.

Advertisement

ತ‌ರಬೇತಿ ಶಿಬಿರಕ್ಕೆ ಆಹ್ವಾನಿಸದೆ ತಡೆ ಒಡ್ಡಿರುವ ಮಾಹಿತಿ ಪಡೆದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಕಬಡ್ಡಿ ಅಸೋಸಿಯೇಶನ್‌ನ ಸಿಇಒ ಜತೆಗೆ ಚರ್ಚಿಸಿದ್ದು, ಪೂರಕ ಸ್ಪಂದನೆ ವ್ಯಕ್ತವಾಗಿದೆ. ಐವರ್ನಾಡು ಪಾಲೆಪ್ಪಾಡಿ ನಿವಾಸಿ, ಉಜಿರೆ ಕಾಲೇಜಿನ ಹಳೆವಿದ್ಯಾರ್ಥಿ ಸಚಿನ್‌ ಅವರನ್ನು ತರಬೇತಿ ಪಟ್ಟಿಯಿಂದ ಕೈ ಬಿಟ್ಟಿರುವ ಬಗ್ಗೆ ಸೆ. 25ರಂದು “ಉದಯವಾಣಿ’ ವಿಸ್ತೃತ ವರದಿ ಪ್ರಕಟಿಸಿತ್ತು. ಅನಂತರದ ಬೆಳವಣಿಗಳ ಬಗ್ಗೆ ವರದಿ ಪ್ರಕಟಿಸಿ ಕ್ರೀಡಾಪಟುವಿಗೆ ನ್ಯಾಯ ಒದಗಿಸುವಂತೆ ಜನಪ್ರತಿನಿಧಿಗಳ, ಅಧಿಕಾರಿಗಳ ಗಮನಕ್ಕೆ ತಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next