Advertisement

ನಟರಾಜ್‌ ಹತ್ಯೆ ಹಿಂದೆಪೆಟ್ಟಿಕೋಟ್‌ ಕೈವಾಡ

12:38 PM Jan 18, 2018 | |

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯ ನಟರಾಜ್‌ ಹತ್ಯೆ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಅಕ್ರಮ ಪಾಲುದಾರ ಪೆಟ್ಟಿಕೋಟ್‌ ಚಂದ್ರಪ್ಪ ಅವರ ಕುಮ್ಮಕ್ಕಿದೆ ಎಂದು ಬಿಜೆಪಿ ನಗರ ವಕ್ತಾರ ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿರುವ ಕೆಜಿ ರಸ್ತೆಯಲ್ಲಿರುವ ಗುಪ್ತಾ ಮಾರ್ಕೆಟ್‌ನ ಪೆಟ್ಟಿಕೋಟ್‌ ಚಂದ್ರಪ್ಪನ ಜತೆ ದಿನೇಶ್‌ ಗುಂಡೂರಾವ್‌ ಅಕ್ರಮವಾಗಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿರುವುದನ್ನು ಎಸ್‌. ನಟರಾಜ್‌ ಪಾಲಿಕೆ ಸಭೆಯಲ್ಲಿ ಪ್ರಸ್ತಾಪಿಸಿದ್ದರು.

Advertisement

ಈ ಹಿನ್ನೆಲೆಯಲ್ಲಿ ಪೆಟ್ಟಿಕೋಟ್‌ ಚಂದ್ರಪ್ಪ, ನಟರಾಜ್‌ ಮೇಲೆ ದ್ವೇಷ ಸಾಧಿಸುತ್ತಿದ್ದರು. ಹೀಗಾಗಿ 2011ರ ಅ.1ರಂದು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ನಟರಾಜ್‌ ಕೊಲೆ ಮಾಡಲಾಗಿತ್ತು ಎಂದು ರಮೇಶ್‌ ಆರೋಪಿಸಿದ್ದಾರೆ. ನಟರಾಜ್‌ ಹತ್ಯೆ ಆರೋಪದಲ್ಲಿ 11 ಜನರನ್ನು ಬಂಧಿಸಲಾಗಿತ್ತು. ಈ ಕೊಲೆಯ ಸತ್ಯ ಹೊರ ಬರಲು ಪಾಲ್‌, ಮುರುಗನ್‌, ಮಣಿ, ಅಶೋಕ್‌ ಬಿ. ದಾನಿ, ಪೆಟ್ಟಿಕೋಟ್‌ ಚಂದ್ರಪ್ಪ ಮತ್ತು ವೈಯಾಲಿ ಕಾವಲ್‌  ಶಾಂತಿ ಎನ್ನುವವರನ್ನು ಮಂಪರು ಪರೀಕ್ಷೆಗೆ ಒಳ ಪಡಿಸಬೇಕೆಂದು ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next