Advertisement

ನಾರ್ಯ-ದೊಂಡೋಲೆಯಲೆಯಲ್ಲಿ ಒಂಟಿ ಸಲಗ; ಸ್ಥಳೀಯರು, ಅರಣ್ಯ ಇಲಾಖೆ ಕಾರ್ಯಾಚರಣೆ

12:20 AM Mar 09, 2024 | Team Udayavani |

ಬೆಳ್ತಂಗಡಿ: ನಾರ್ಯ-ದೊಂಡೋಲೆ ಪರಿಸರದಲ್ಲಿ ಕಳೆದ ಐದು ದಿನಗಳಿಂದ ಒಂಟಿ ಸಲಗ ಕಾಣಿಸಿಕೊಂಡ ಪರಿಣಾಮ ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸಿಬಂದಿ ಸತತ ಕಾರ್ಯಾಚರಣೆ ನಡೆಸಿದ್ದಾರೆ.

Advertisement

ನರೇಶ್‌ ದೇವಾಡಿಗ ಅವರ ತೋಟದಲ್ಲಿ ರಾತ್ರಿ 8ರ ವೇಳೆಗೆ ಒಂಟಿ ಸಲಗ ಕಾಣಿಸಿಕೊಂಡಿದ್ದು, ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ತತ್‌ಕ್ಷಣ ಸ್ಪಂದಿಸಿದ ಸಿಬಂದಿ ರಾತ್ರಿಯಿಡೀ ಗಸ್ತು ತಿರುಗಿ ಊರಿನವರು ಒಟ್ಟಾಗಿ ಸೇರಿ ಆನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ನಡೆಸಿದರು. ಪಟಾಕಿ ಮತ್ತು ಗಾಳಿಯಲ್ಲಿ ಗುಂಡು ಹಾರಿಸಿ ಒಂಟಿ ಸಲಗವನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.

ಈ ಕಾರ್ಯಾಚರಣೆಯಲ್ಲಿ ಉಜಿರೆ ಶಾಖೆ ಅರಣ್ಯಾಧಿಕಾರಿ ಹರಿಪ್ರಸಾದ್‌, ಧರ್ಮಸ್ಥಳ ಗಸ್ತು ಅರಣ್ಯ ಪಾಲಕ ಸಂತೋಷ್‌ ರಾತ್ರಿ ಗಸ್ತು ತಂಡದ ಗಸ್ತು ಅರಣ್ಯ ಪಾಲಕ ಸತೀಶ್‌ ಡಿ’ಸೋಜಾ, ಉಜಿರೆ ಅರಣ್ಯ ವೀಕ್ಷಕ ಸದಾನಂದ, ವಾಹನ ಚಾಲಕ ಕುಶಾಲಪ್ಪ ಗೌಡ, ವಲಯ ಅರಣ್ಯ ಅಧಿಕಾರಿ ಮೋಹಬ್‌ ಕುಮಾರ್‌ ಮಾರ್ಗದರ್ಶನ ಮತ್ತು ಸ್ಥಳೀಯರು ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next