Advertisement

Belthangady ಜಾನುವಾರು ಮಾಂಸ ಅಕ್ರಮ ಶೇಖರಣೆ ಪತ್ತೆ

09:47 PM Apr 08, 2024 | Team Udayavani |

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಅರಮಲೆಬೆಟ್ಟ ಎನ್ನುವಲ್ಲಿ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿದ್ದಾರೆ.

Advertisement

ಈ ವೇಳೆ ಬದ್ರುದ್ದೀನ್‌ ಎಂಬಾತನ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಯಾವುದೇ ಪರಾವಾನಿಗೆ ಇಲ್ಲದೆ ಮಾರಾಟ ಮಾಡಲು ಶೇಖರಿಸಿಟ್ಟ ಅಂದಾಜು 87 ಕೆ.ಜಿ. ದನದ ಮಾಂಸ, ಮಾಂಸಕ್ಕಾಗಿ ಕಡಿದಿದ್ದ 6 ಜಾನುವಾರುಗಳನ್ನು ಹಾಗೂ ಮಾಂಸ ಮಾಡಲು ಉಪಯೋಗಿಸಿದ್ದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳಾದ ಪಿಲಿಚಂಡಿಕಲ್ಲು ನಿವಾಸಿ ಅಬ್ದುಲ್‌ ರಹಿಮಾನ್‌ (35) ಹಾಗೂ ಕುವೆಟ್ಟು ಗ್ರಾಮದ ಇಕ್ಬಾಲ್‌ (42)ನನ್ನು ಬೆಳ್ತಂಗಡಿ ಪೊಲೀಸ್‌ ಉಪನಿರೀಕ್ಷಕ ಮುರಳೀಧರ್‌ ಕೆ.ಜಿ. ಅವರು ಬಂಧಿಸಿ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next