Advertisement

ಆರ್ಥಿಕತೆ ಗುರಿ ಸಾಧಿಸಲು ಪ್ರತಿ ಜಿಲ್ಲೆಯ ಪಾತ್ರವೂ ಇದೆ

09:42 AM Nov 09, 2019 | Hari Prasad |

ಧರ್ಮಶಾಲಾ: 2025ರ ಒಳಗಾಗಿ ದೇಶದ ಅರ್ಥ ವ್ಯವಸ್ಥೆಯನ್ನು 5 ಲಕ್ಷಕೋಟಿ ಡಾಲರ್‌ಗೆ ಏರಿಸುವಲ್ಲಿ ಪ್ರತಿ ರಾಜ್ಯ, ಜಿಲ್ಲೆಯ ಪಾತ್ರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದಲ್ಲಿ ಗುರುವಾರ ಆರಂಭವಾದ 2 ದಿನಗಳ ಹೂಡಿಕೆದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ದೇಶದ ಪ್ರತಿ ರಾಜ್ಯ, ಪ್ರತಿ ಜಿಲ್ಲೆ ಹೂಡಿಕೆಗೆ ಅಗತ್ಯವಾಗಿರುವ ವಾತಾವರಣ ಹೊಂದಿದೆ. 2025ರ ಒಳಗಾಗಿ ದೇಶದ ಅರ್ಥ ವ್ಯವಸ್ಥೆಯನ್ನು 5 ಲಕ್ಷಕೋಟಿ ಡಾಲರ್‌ಗೆ ಏರಿಕೆ ಮಾಡುವಲ್ಲಿ ಇವುಗಳು ಪ್ರಧಾನ ಪಾತ್ರ ವಹಿಸಲಿವೆ ಎಂದು ಹೇಳಿದ್ದಾರೆ. ಹಿಂದಿನ ದಿನಗಳಂತೆ ಈಗ ಪರಿಸ್ಥಿತಿ ಇಲ್ಲ. ರಾಜ್ಯಗಳು ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಸ್ಪರ್ಧೆಗೆ ಇಳಿದಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next