Advertisement

 ಮೋದಿಗೂ ಅಂಟುತ್ತೆ ಹಗರಣಗಳ ಮಸಿ: ಚಿದಂಬರಂ

09:22 AM Nov 20, 2017 | Team Udayavani |

ಮುಂಬಯಿ: ಕೇಂದ್ರದಲ್ಲಿ ಅಧಿಕಾರದಲ್ಲಿರುನ ನರೇಂದ್ರ ಮೋದಿ ಸರಕಾರವು ತನ್ನ ಅಧಿಕಾರಾವಧಿಯ ಅಂತ್ಯದ ವೇಳೆಗೆ ತಾನು ಮಾಡಿರ ಬಹುದಾದ ಭ್ರಷ್ಟಾಚಾರಗಳ ಕಳಂಕಗಳನ್ನು ಖಂಡಿತವಾಗಿಯೂ ಹೊತ್ತು ಕೊಳ್ಳುತ್ತದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಭವಿಷ್ಯ ನುಡಿದಿದ್ದಾರೆ. 

Advertisement

ಟಾಟಾ ಸಾಹಿತ್ಯ ಸಮ್ಮೇಳ ನದಲ್ಲಿ ಮಾತನಾಡಿದ ಅವರು, “”ಈ ಹಿಂದೆ ಯುಪಿಎ-2 ಸರಕಾರ ಅಧಿ ಕಾರದಲ್ಲಿದ್ದಾಗ ಯಾವುದೇ ಕಳಂಕ ತಾಗಿರಲಿಲ್ಲ. ಆದರೆ, ಅಧಿಕಾರಾವಧಿ ಮುಗಿಯುತ್ತಾ ಬಂದಂತೆ ಅದಕ್ಕೆ ಹಲವಾರು ಹಗರಣಗಳ ಮಸಿ ಮೆತ್ತಿಕೊಂಡಿತು. ಹಾಗೆಯೇ, ಸದ್ಯಕ್ಕೆ ಮೋದಿ ಸರಕಾರ ಜನಪ್ರಿಯತೆಯ ತುತ್ತ ತುದಿಯಲ್ಲಿದೆಯಾದರೂ ಅವರ ಸರಕಾರದ ಅಧಿಕಾರ ಕೊನೆ ಗೊಳ್ಳುವ ಹೊತ್ತಿಗೆ ಆ ಸರಕಾರಕ್ಕೂ ಕಪ್ಪು ಮಸಿ ತಾಗುತ್ತದೆ” ಎಂದರು. ಆದರೆ, ಹಗರಣಗಳ ಕಪ್ಪು ಚುಕ್ಕೆ ತಾಗದಿರಲಿ ಎಂದು ಆಶಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next