Advertisement

ಕತ್ತೆಗಳನ್ಯಾಕೆ ಟಾರ್ಗೆಟ್ ಮಾಡ್ತೀರಿ? ಅಖಿಲೇಶ್ ಗೆ ಮೋದಿ ತಿರುಗೇಟು

06:03 PM Feb 23, 2017 | Sharanya Alva |

ಲಕ್ನೋ: ಅಖಿಲೇಶ್ ಜೀ…ನನಗೆ ಅರ್ಥವಾಗುತ್ತದೆ, ನೀವು ಮೋದಿಯೋ ಅಥವಾ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿ, ಆದರೆ ನೀವೀಗ ಕತ್ತೆಗಳನ್ಯಾಕೆ ಗುರಿಯಾಗಿರಿಸಿಕೊಂಡಿದ್ದೀರಿ? ನೀವು ಕತ್ತೆಗಳಿಗೆ ಹೆದರುತ್ತಿದ್ದೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

Advertisement

ಉತ್ತರಪ್ರದೇಶ ಚುನಾವಣೆಯ ಜಿದ್ದಾಜಿದ್ದಿನಲ್ಲಿ ಇತ್ತೀಚೆಗೆ ರಾಯ್ ಬರೇಲಿಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ನೀವು ಈ ಶತಮಾನದ ಮಹಾನ್ ಕಲಾವಿದ ಹಾಗಾಗಿ ದಯವಿಟ್ಟು ಗುಜರಾತ್ ನ ಕತ್ತೆಗಳ ಪರ ಪ್ರಚಾರ ಮಾಡೋದನ್ನು ನಿಲ್ಲಿಸಿ ಎಂದು ಬಾಲಿವುಡ್ ಬಿಗ್ ಬಿ, ಗುಜರಾತ್ ಪ್ರವಾಸೋದ್ಯಮ ರಾಯಭಾರಿಯಾಗಿದ್ದ ಅಮಿತಾಬ್ ಬಚ್ಚನ್ ಗೆ ಮನವಿ ಮಾಡಿಕೊಂಡಿದ್ದರು.

ಗುರುವಾರ ಉತ್ತರಪ್ರದೇಶದ ಬಹಾರಿಕ್ ಪ್ರದೇಶದಲ್ಲಿ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಖಿಲೇಶ್ ವ್ಯಂಗ್ಯಕ್ಕೆ ತಕ್ಕ ತಿರುಗೇಟು ನೀಡಿ ಪ್ರತಿಕ್ರಿಯಿಸಿದ್ದಾರೆ.

ನಾನು ಕತ್ತೆಗಳಿಂದಲೇ ಸ್ಫೂರ್ತಿ ಪಡೆದಿದರುವುದು. ಯಾಕೆಂದರೆ ಕತ್ತೆಗಳು ತಮ್ಮ ಯಜಮಾನನಿಗೆ ನಿಷ್ಠೆಯನ್ನು ಹೊಂದಿರುತ್ತವೆ ಮತ್ತು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸುತ್ತವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next