Advertisement

ಸೈಕಲ್ ನಲ್ಲಿ ತೆರಳಿದ ತಹಶೀಲ್ದಾರ್‌!

12:53 PM Jul 04, 2019 | Naveen |

ನರಗುಂದ: ಇಲ್ಲಿನ ತಹಶೀಲ್ದಾರ್‌ ಆಶಪ್ಪ ಪೂಜಾರ ಅವರು ಇಂಧನ ಉಳಿತಾಯಕ್ಕೆ ಮನ್ನಣೆ ನೀಡುವ ಉದ್ದೇಶದೊಂದಿಗೆ ಖುದ್ದಾಗಿ ಸೈಕಲ್ನಲ್ಲಿ ತಮ್ಮ ಕಚೇರಿಗೆ ತೆರಳಿ ಎಲ್ಲರ ಗಮನ ಸೆಳೆದಿದ್ದಾರೆ!

Advertisement

ಕಂದಾಯ ನಿರೀಕ್ಷಕ ಎಸ್‌.ಐ. ಹಾಡಕರ ಅವರೊಂದಿಗೆ ತಮ್ಮ ಮನೆಯಿಂದ ರೇಂಜರ್‌ ಸೈಕಲ್ ಹತ್ತಿದ ತಹಶೀಲ್ದಾರ್‌ ಆಶಪ್ಪ ಪೂಜಾರ ಅವರು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮಿನಿ ವಿಧಾನಸೌಧಕ್ಕೆ ತೆರಳಿದರು.

ಪ್ರತಿ ತಿಂಗಳು ಉದ್ದೇಶ: ಇಂಧನ ಉಳಿತಾಯ ದೃಷ್ಟಿಕೋನದ ಸಂಕಲ್ಪ ತೊಟ್ಟ ತಹಶೀಲ್ದಾರ್‌ ಅವರು, ಇನ್ನು ಮುಂದೆ ಪ್ರತಿ ತಿಂಗಳು ಒಂದನೇ ತಾರೀಖೀನಂದು ನಿರಂತರ ಸೈಕಲ್ ಸವಾರಿಯೊಂದಿಗೆ ಕಚೇರಿಗೆ ತೆರಳುವ ಉದ್ದೇಶ ಹೊಂದಿದ್ದಾರೆ. ಇದು ಇತರೆ ಇಲಾಖೆ ಅಧಿಕಾರಿಗಳಿಗೆ ಮಾದರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next