Advertisement

ನ್ಯಾನೋ ಕಾಂಪೋಸಿಟ್‌ ಅಧ್ಯಯನ ಆಶಾದಾಯಕ; ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

05:43 PM Jan 09, 2024 | Team Udayavani |

ಉದಯವಾಣಿ ಸಮಾಚಾರ
ಕಲಬುರಗಿ: ಜಗತ್ತಿನ ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ನ್ಯಾನೋ ಕಾಂಪೋಸಿಟ್‌ ಗಳ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಏರಿಕೆ ಕಂಡು ಬಂದಿದ್ದು, ಇದು ಭಾರತದ ಪ್ರಗತಿಗೆ ಆಶಾದಾಯಕ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ| ಎಸ್‌.ಆರ್‌. ನಿರಂಜನ್‌ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಗುಲ್ಬರ್ಗ ವಿವಿಯ ಆಶ್ರಯದಲ್ಲಿ ಯುನೈಟೆಡ್‌ ಕಿಂಗ್‌ಡಂ ಬ್ರಾಡ್‌ಫೋರ್ಡ್‌ ವಿವಿ ಜತೆ ಸೇರಿ ಸೋಮವಾರದಿಂದ ಹಮ್ಮಿಕೊಂಡಿದ್ದ “ಮಾನವನ ಆರೋಗ್ಯಕ್ಕಾಗಿ ಬಯೋ ನ್ಯಾನೋ ಸಂಯೋಜನೆಗಳಲ್ಲಿ ಇತ್ತೀಚಿನ ಪ್ರಗತಿಗಳು’ ವಿಷಯ ಕುರಿತು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನ್ಯಾನೋ ಕಾಂಪೋಸಿಟ್‌ಗಳು ಅವುಗಳ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳಲ್ಲಿ ಬದಲಾಗುತ್ತವೆ. ಇಂದಿನ ಯುಗದಲ್ಲಿ, ಪರಿಸರ ಸ್ನೇಹಿ, ವಿಷಕಾರಿಯಲ್ಲದ, ಜೈವಿಕ  ಹೊಂದಾಣಿಕೆಯ, ಜೈವಿಕ ಆಧಾರಿತ ಫಿಲ್ಲರ್‌ಗಳು ಮತ್ತು ಸಂಯುಕ್ತಗಳನ್ನು ವಿವಿಧ ಅಂಶಗಳಲ್ಲಿ ತಮ್ಮ ಸಾಮಾಜಿಕ ಮೌಲ್ಯ ಹೆಚ್ಚಿಸಲು ಸಂಶೋಧನೆಗಳು ಆಗಬೇಕು.

ಈ ವಸ್ತುಗಳು ಬಯೋಸೆನ್ಸಾರ್‌ಗಳಿಂದ ಹಿಡಿದು ಬಯೋಮೆಡಿಸಿನ್‌ ವರೆಗೆ ಬಳಕೆ ಹಲವಾರು ಕೈಗಾರಿಕೆಗಳಲ್ಲಿ ವ್ಯಾಪಕವಾಗಿ
ಕಂಡು ಬಂದಿದೆ. ಮೈಕ್ರೋಬಯಾಲಜಿ ಕ್ಷೇತ್ರದಲ್ಲಿ ವಿಶೇಷವಾಗಿ ಆಂಟಿಬ್ಯಾಕ್ಟೀರಿಯಲ್‌ ಏಜೆಂಟ್‌ಗಳಂತೆ ಈ ಅಪ್ಲಿಕೇಷನ್‌ಗಳಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದರು.

ಜಾಗತಿಕ ಆರೋಗ್ಯದ ಏಕಾಏಕಿ ಪ್ರತಿಕ್ರಿಯೆಯಾಗಿ ಸಾಂಕ್ರಾಮಿಕ ಸಾರ್ಸ್‌ ಮತ್ತು ಕೋವಿಡ್‌ ಎರಡೂ ವೈರಸ್‌ ಹರಡುವಿಕೆ ತಡೆಯಲು ವೈರಸ್‌ಗಳು-ವಿನ್ಯಾಸಗೊಳಿಸಿದ ಲೇಪನ ಸಾಮಗ್ರಿಗಳು ಮತ್ತು ಸಂಭಾವ್ಯ ನ್ಯಾನೋ ಕೋಟಿಂಗ್‌ಗಳ ಕುರಿತು ಇತ್ತೀಚಿನ ಸಂಶೋಧನೆ ಚೆನ್ನಾಗಿ ಪರಿಶೋಧಿಸಲಾಗಿದೆ ಎಂದರು.

ನ್ಯಾನೋ ಪಾರ್ಟಿಕಲ್‌ಗ‌ಳನ್ನು ಔಷಧವಿತರಣಾ ಉದ್ದೇಶಗಳಿಗಾಗಿ ಬಳಸಬಹುದು, ಔಷಧ  ಸ್ವತಃ ಅಥವಾ ಔಷಧ ವಾಹಕವಾಗಿ ಉತ್ಪನ್ನ ಮೌಖೀಕವಾಗಿ ನಿರ್ವಹಿಸಬಹುದು, ಚರ್ಮದ ಮೇಲೆ ಅನ್ವಯಿಸಬಹುದು ಅಥವಾ ಚುಚ್ಚುಮದ್ದು ಮಾಡಬಹುದು. ವಿದ್ಯುತ್‌ ಮತ್ತು ಬ್ಯಾಕ್ಟೀರಿಯಾ ವಿರೋಧಿ  ಗುಣಲಕ್ಷಣಗಳು 11 ಪಾಲಿಮರ್‌ನ ವಿದ್ಯುತ್‌ ಗುಣಲಕ್ಷಣ ಸಂಯೋಜಿಸುವ ಲೋಹದ ನ್ಯಾನೋ ಪರ್ಟಿಕಲ್‌ಗ‌ಳು ಅಥವಾ ಗ್ರಾಫೀನ್‌ನಂತಹ ಇತರ ವಾಹಕ ವಸ್ತುಗಳಿಂದ ಉತ್ತಮವಾಗಿ ಟ್ಯೂನ್‌ ಮಾಡಬಹುದು. ಶುದ್ಧ ಎಲೆಕ್ಟ್ರಾನಿಕ್ಸ್‌ನಲ್ಲಿನ ಹೆಚ್ಚುವರಿ ಅಪ್ಲಿಕೇಷನ್‌ಗಳಲ್ಲಿ, ಬಯೋಸೆನ್ಸಾರ್‌ಗಳು ರಕ್ತದಲ್ಲಿನ ಗ್ಲೂಕೋಸ್‌ ಅಥವಾ ಕಿಣ್ವ ಗ್ಲೂಕೋಸ್‌ ಆಕ್ಸಿಡೇಸ್‌ ಇರುವಿಕೆ ಪತ್ತೆ ಮಾಡಬಹುದು ಎಂದರು.

Advertisement

ಮಧುಮೇಹ ಹೊಂದಿರುವವರಿಗೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿರಂತರ ನೈಜ-ಸಮಯದ ಮೇಲ್ವಿಚಾರಣೆಗೆ ಅನುಮತಿಸುತ್ತದೆ. ಬೆಳ್ಳಿಯ ನ್ಯಾನೋ ಪರ್ಟಿಕಲ್‌ ಗಳು ಬ್ಯಾಕ್ಟೀರಿಯಾ ವಿರೋಧಿ  ಗುಣಲಕ್ಷಣಗಳ ಪುರಾವೆ ತೋರಿಸಿವೆ ಮತ್ತು ಪಾಲಿಮರ್‌-ಮ್ಯಾಟ್ರಿಕ್ಸ್‌ ನಲ್ಲಿ ಅಳವಡಿಸುವಿಕೆ ಅವುಗಳ ನಿಧಾನಗತಿಯ ಬಿಡುಗಡೆಗೆ ಅನುವು ಮಾಡಿಕೊಡುತ್ತದೆ. ಅದರ ಮೇಲೆ ಸೂಕ್ಷ್ಮಜೀವಿಗಳ ಬೆಳವಣಿಗೆ ತಡೆಯಲು ಸಮರ್ಥವಾಗಿರುವ ಬ್ಯಾಕ್ಟೀರಿಯಾ ವಿರೋಧಿ ಪರಿಸರ ನಿರ್ವಹಿಸುತ್ತದೆ ಎಂದರು.

ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ್‌ ಮಾತನಾಡಿ, ನಮ್ಮ ವಿವಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಒಟ್ಟು 9 ದೇಶಿ ಹಾಗೂ 9 ವಿದೇಶಿ ವಿವಿಗಳು ಸೇರಿ ಒಟ್ಟು 18 ವಿವಿಗಳ 24 ಜನ ಪ್ರಮುಖ ಸ್ಪೀಕರ್‌ಗಳು ಹಲವಾರು ವಿಷಯಗಳ ಕುರಿತು ಅಭಿಪ್ರಾಯ, ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ.

ನಾಲ್ಕು ಹಂತಗಳಲ್ಲಿ ವಿಷಯಗಳ ಮಂಡನೆಯೂ ಆಗಲಿದೆ. ಅಲ್ಲದೇ ಹೈ ಪ್ರೋಫೈಲ್‌ ಅಕಾಡೆಮಿ ಟಾಸ್ಕ್ ಫೋರ್ಸ್‌ ರಚನೆ ಸೇರಿದಂತೆ ಹಲವಾರು ಚಟುವಟಿಕೆಗೆ ನಮ್ಮ ವಿದ್ಯಾರ್ಥಿಗಳು ಸಾಕ್ಷಿಯಾಗಲಿದ್ದಾರೆ. ಆದ್ದರಿಂದ ಇದರ ಪ್ರಯೋಜನ ವಿದ್ಯಾರ್ಥಿಗಳು, ಅಧ್ಯಾಪಕರು ಪಡೆಯಬೇಕು ಎಂದರು.

ಯುನೈಟೆಡ್‌ ಕಿಂಗಡಂನ ಬ್ರಾಡ್‌ಫೋರ್ಡ್‌ ವಿವಿಯ ಕುಲಪತಿ ಪ್ರೊ| ಶೆರ್ಲಿ ಕಂಡೋನ್‌ ಆನ್‌ಲೈನ್‌ ನಲ್ಲಿ ಉಪಸ್ಥಿತರಿದ್ದರು. ಬ್ರಾಡ್‌ಫೋರ್ಡ್‌ ವಿವಿಯ ಡಾ| ಎಸ್‌.ಎ. ಖಗನಿ, ಗುವಿವಿ ಪ್ರೊ| ಜಿ.ಎಂ. ವಿದ್ಯಾಸಾಗರ ಪ್ರಾಸ್ತಾವಿಕ ಮಾತನಾಡಿದರು. ಗುವಿವಿ ಕುಲಸಚಿವ ಡಾ| ಬಿ. ಶರಣಪ್ಪ ಸ್ವಾಗತಿಸಿದರು. ಹರಿಯಾಣದ ಅಮೆಥಿ ವಿವಿಯ ಡೀನ್‌ ಪ್ರೊ| ರಾಜೇಂದ್ರ ಪ್ರಸಾದ್‌, ವಿವಿ ಸಿಂಡಿಕೇಟ್‌ ಸದಸ್ಯ ರಾಘವೇಂದ್ರ ಭೈರಪ್ಪ, ಕೌನ್ಸಿಲ್‌ ಸದಸ್ಯ ಟಿ. ಶಂಕರಪ್ಪ ಸೇರಿದಂತೆ ಇತರರು ಇದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್‌) ಸಂಸ್ಥಾಪನಾ ದಿನದಂದು ಮಾತನಾಡಿ, “ಕಡಿಮೆ ಭೂಮಿ, ಕಡಿಮೆ ಸಮಯ, ಹೆಚ್ಚು ಉತ್ಪಾದಕತೆ’, ಬದಲಾಗುತ್ತಿರುವ ಹವಾಮಾನ ಎದುರಿಸಲು ರೈತರು ಕಡಿಮೆ ಸಮಯದಲ್ಲಿ ಬೆಳೆ ಬೆಳೆಯಬೇಕು. ಮಿಶ್ರ ತಳಿಗಳಲ್ಲಿನ ಉತ್ತಮ ವಿಂಗಡಣೆಗಳು ಹಲವಾರು ಬೆಳೆಗಳಿಗೆ ಕೊಯ್ಲು ಚಕ್ರ ಕಡಿಮೆ ಮಾಡುತ್ತವೆ ಮತ್ತು ಉತ್ತಮ ಇಳುವರಿ ಮತ್ತು ಸಸ್ಯದ ಸ್ಟ್ಯಾಂಡ್‌ ಗೆ ಕಾರಣವಾಗಿವೆ ಎಂದು ಕೇವಲ ಒಂದು ವಾಕ್ಯದಲ್ಲಿ ಸಮೀಕರಣಗೊಳಿಸಿದ್ದಾರೆ.
ಪ್ರೊ| ಎಸ್‌.ಆರ್‌. ನಿರಂಜನ್‌, ಕರ್ನಾಟಕ
ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next