Advertisement

Nanjangud; ಕೊಟ್ಟಿಗೆಗೆ ನುಗ್ಗಿ ಕರು ಹೊತ್ತೊಯ್ದ ಹುಲಿ

12:59 PM Dec 15, 2023 | Team Udayavani |

ಮೈಸೂರು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಹುಲಿಯೊಂದು ಹೊತ್ತೊಯ್ದ ಘಟನೆ ನಂಜನಗೂಡು ತಾಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಮಾಸ್ತಮ ದೇವಾಲಯದ ಮುಂಭಾಗದಲ್ಲಿ ಹುಲಿ ಕಾಣಿಸಿಕೊಂಡಿದೆ. ಬೆಳಗಿನ ಜಾವದಲ್ಲಿ ಪಟೇಲ್ ಮಹದೇವಪ್ಪ ಎಂಬುವವರ ಕೊಟ್ಟಿಗೆಗೆ ಏಕಾಏಕಿ ನುಗ್ಗಿದ್ದ ಹುಲಿ ಕರುವನ್ನು ಹೊತ್ತೊಯ್ದಿದೆ.

ಹುಲಿ ಬರುತ್ತಿರುವ ದೃಶ್ಯವು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next