Advertisement

ನಂದಿನಿ ತುಪ್ಪ ಕಲಬೆರೆಕೆ : ಕಠಿಣ ಕ್ರಮಕ್ಕೆ ಮಾಲೂರು ಶಾಸಕ ನಂಜೇಗೌಡ ಆಗ್ರಹ

11:56 AM Dec 24, 2021 | Team Udayavani |

ಸುವರ್ಣ ಸೌಧ : ಮೈಸೂರಿನಲ್ಲಿ ನಂದಿನಿ ತುಪ್ಪ ಕಲಬೆರೆಕೆ ಪ್ರಕರಣಕ್ಕೆ ಸಂಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ಸರಕಾರವನ್ನು ಆಗ್ರಹಿಸಿದ್ದಾರೆ.

Advertisement

ನಂದಿನಿಗೆ ಒಂದು ಬ್ರ್ಯಾಂಡ್ ಇದೆ. ನಾನು ಸಹ ಚಿಕ್ಕಬಳ್ಳಾಪುರ, ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷನಿದ್ದೇನೆ, ಬೇರೆ ಬೇರೆ ತುಪ್ಪ ಬೆರೆಸಿ ಇಂಥ ಕೆಲಸ ಮಾಡಲಾಗುತ್ತಿದೆ. ಇದು ಕೆಎಂಎಫ್ ನ ಜವಾಬ್ದಾರಿ. ಸಿಎಂ ಬೊಮ್ಮಾಯಿ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇನೆ, ಎಷ್ಟೇ ದೊಡ್ಡವರಾಗಿರಲಿ, ಯಾರೇ ಆಗಿರಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳು ನಡೆದರೆ ಕಠಿಣ ತೆಗೆದುಕೊಳ್ಳಬೇಕು. ಮೈಸೂರು, ತುಮಕೂರು, ಹೊಸಕೊಟೆ ಈ ಭಾಗಗಲ್ಲಿ ಕಲೆಬೆರೆಕೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next