Advertisement

ಹಿಜಾಬ್ ಹಲಾಲ್ ಗೆ ಸರ್ಕಾರದ ಕುಮ್ಮಕ್ಕಿಲ್ಲ : ನಳಿನ್ ಕುಮಾರ್ ಕಟೀಲ್

05:23 PM May 16, 2022 | Team Udayavani |

ಕಲಬುರಗಿ : ಹಿಜಾಬ್, ಹಲಾಲ್ ಹಾಗೂ ಮಸೀದಿಗಳಲ್ಲಿ ಹಿಂದೂ ದೇವರ ವಿಗ್ರಹಗಳ ಅಸ್ತಿತ್ವದ ಬಗ್ಗೆ ಸಂಶೋಧನೆ ನಡೆಸುವ ಬಗ್ಗೆ ಹೋರಾಟಗಾರರ ಮನವಿ‌ ಮೇರೆಗೆ ಸರ್ಕಾರ‌ ಕ್ರಮ ಕೈಗೊಳ್ಳುತ್ತಿದೆಯೇ ಹೊರತು ಸರ್ಕಾರವೇ ಇವುಗಳಿಗೆ ಕುಮ್ಮಕ್ಕು ನೀಡುತ್ತಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

Advertisement

ಸೋಮವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಜಾಬ್ ಹಲಾಲ್ ಸೇರಿದಂತೆ ಇತರೆ ವಿಷಯಗಳು ಬಿಜೆಪಿಯ ಅಜೆಂಡಾ ಅಲ್ಲ ಎಂದು ಸ್ಪಷ್ಟಪಡಿಸಿದರು.

ಕೊಡಗು ಜಿಲ್ಲೆಯ ಪೊನ್ನಂಪೇಟೆ ಸರಕಾರಿ ಶಾಲೆಯನ್ನು ಬಜರಂಗದಳದ ತರಬೇತಿಗೆ ನೀಡಿರುವ ಕುರಿತು ಗಮನ ಸೆಳೆದಾಗ, ಶಾಲೆಗೆ ರಜೆ ಇದ್ದಿದ್ದರಿಂದ ಕೊಡಗು ಜಿಲ್ಲೆ ಪೊನ್ನಂಪೇಟೆಯ ಶಾಲೆಯನ್ನು ಬಜರಂಗದಳ ಕಾರ್ಯಕರ್ತರಿಗೆ ತರಬೇತಿ‌ ನೀಡಲು ಬಳಸಿಕೊಳ್ಳಲಾಗಿತ್ತು. ತರಬೇತಿ ಸಂದರ್ಭದಲ್ಲಿ ಸಣ್ಣ ‌ಗಾತ್ರದ ತ್ರಿಶೂಲ ನೀಡುವ ರೂಢಿ ಸಂಪ್ರದಾಯವಿದೆ ಇದೆ ಎಂದರು.

ಬಜರಂಗ ದಳದವರು ಶಸ್ತ್ರಾಸ್ತ್ರ ತರಬೇತಿ ನೀಡಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಆಯುಧ ಬಳಕೆ ತರಬೇತಿ ನೀಡುವುದಿಲ್ಲ. ತ್ರಿಶೂಲವನ್ನು ನೀಡುವ ಸಂಪ್ರದಾಯ ಬಜರಂಗ ದಳದಲ್ಲಿ ಇದೆ ಎಂದರು‌.

ಇದನ್ನೂ ಓದಿ : ಸೊರಬದಲ್ಲಿ ಸಂಭ್ರಮದಿಂದ ಜರುಗಿದ ಶ್ರೀ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ

Advertisement
Advertisement

Udayavani is now on Telegram. Click here to join our channel and stay updated with the latest news.

Next