Advertisement

ನಳಿನ್‌ ದ್ರೋಹ: ಪಾಲೆಮಾರ್‌ ಆರೋಪ 

10:56 AM Apr 22, 2018 | |

ಮಂಗಳೂರು: ಮಂಗಳೂರು ನಗರ ಉತ್ತರ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಯಾಗಿದ್ದ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಅವರು ತನಗೆ ಟಿಕೆಟ್‌ ಕೈತಪ್ಪಲು ಸಂಸದ ನಳಿನ್‌ ಕುಮಾರ್‌ ಕಟೀಲು ಅವರೇ ಕಾರಣ ಎಂದು ಆರೋಪಿಸಿದ್ದಾರೆ. 

Advertisement

ನಾನು ಬಿಜೆಪಿಗೆ ಯಾವುದೇ ದ್ರೋಹ ಎಸಗಿಲ್ಲ, ಲೋಕಸಭಾ ಚುನಾವಣೆ ವೇಳೆ ನಳಿನ್‌ ಗೆಲ್ಲಿಸಲು ನನ್ನ ಕೈಯಾರೆ ಹಣ ಖರ್ಚು ಮಾಡಿದ್ದೇನೆ. ಆದರೆ ಈಗ ಅವರು ನನಗೆ ದ್ರೋಹ ಎಸಗಿದ್ದಾರೆ ಎಂದು ಬೇಸರದಿಂದ ಹೇಳುತ್ತಿದ್ದೇನೆ ಎಂದು ಪಾಲೆಮಾರ್‌ ಅವರು ಶನಿವಾರ ಮಾಧ್ಯಮದ ಮಂದಿಗೆ ತಿಳಿಸಿದರು. 

ಯಡಿಯೂರಪ್ಪ ಅವರ ಕಚೇರಿಯಿಂದ ಕೆಲವು ದಿನಗಳ ಹಿಂದೆ ಕರೆ ಮಾಡಿ ಬಿ ಫಾರಂ ನೀಡುವ ಬಗ್ಗೆ ಹೆಸರು, ಐಡಿ ಕಾರ್ಡ್‌ ಪಡೆದುಕೊಂಡಿದ್ದರು. ನಳಿನ್‌ ಕೂಡ ಸ್ಪರ್ಧಿಸುವಂತೆ ಕೋರಿಕೊಂಡಿದ್ದರು. ಎ. 23ರಂದು ನಾಮಪತ್ರ ಸಲ್ಲಿಸುವುದಾಗಿ ಕಾರ್ಯಕರ್ತರಿಗೆ ತಿಳಿಸಿದ್ದೆ. ಆದರೆ ಶುಕ್ರವಾರ ಪಟ್ಟಿ ಬಿಡುಗಡೆ ಆಗುವಾಗ ನನ್ನ ಹೆಸರಿಲ್ಲ. ಸಂಸದರೇ ತಪ್ಪಿಸಿದ್ದಾರೆ ಎಂದು ಪಾಲೆಮಾರ್‌ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next