Advertisement

ವಲಸಿಗರ ಗಂಟಲು ದ್ರವ ಸಂಗ್ರಹ

05:43 PM May 23, 2020 | Naveen |

ನಾಲತವಾಡ: ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಮೀಪದ ಚವನಬಾವಿ ಗ್ರಾಮದ ರೇವಣ ಸಿದ್ದೇಶ್ವರ ವಿದ್ಯಾಪೀಠ, ಹುಲಗಬಾಳ ತಾಂಡಾದಲ್ಲಿ ಅನ್ಯ ರಾಜ್ಯಕ್ಕೆ ವಲಸೆ ಹೋಗಿದ್ದ ಕಾರ್ಮಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಶುಕ್ರವಾರ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಹಾಗೂ ಹಿರಿಯ ಪ್ರಯೋಗಶಾಲಾ ತಂತ್ರಜ್ಞ ಈರಣ್ಣ ಚಿನಿವಾರ ಅವರ ಮೇಲ್ವಿಚಾರಣೆಯಲ್ಲಿ ಒಟ್ಟು 221 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಯಿತು.

Advertisement

ಪ್ರಯೋಗ ಶಾಲಾ ತಂತ್ರಜ್ಞ ಈರಣ್ಣ ಚಿನಿವಾರ, ಆನಂದಗೌಡ ಬಿರಾದಾರ, ದಾದಾಪೀರ ಹವಾಲ್ದಾರ, ಸಚಿನ್‌ ರೂಡಗಿ ಅವರು ಸಂಪೂರ್ಣ ಸುರಕ್ಷತೆಯೊಂದಿಗೆ ಪಿಪಿಇ ಕಿಟ್‌ ಧರಿಸಿಕೊಂಡು ದ್ರವದ ಮಾದರಿ ಸಂಗ್ರಹಿಸಿದರು. ಈ ವೇಳೆ ಹಿರಿಯ ಆರೋಗ್ಯ ಸಹಾಯಕರಾದ ಬಿ.ಕೆ ಕನಸಾಯಿ, ಮಲ್ಲಿಕಾರ್ಜುನ ಎಸ್‌, ಆರೋಗ್ಯ ಸಹಾಯಕರಾದ ಸಂತೋಷ ನಾಗರಬೆಟ್ಟ, ಮಲ್ಲಿಕಾರ್ಜುನ ನಾವದಗಿ, ಅಂಬಿಕಾ, ಅಮೃತಾ ಹಾಗೂ ಆಶಾ ಕಾರ್ಯಕರ್ತೆಯರಾದ ದೇವಮ್ಮ ತೊಗರಿ, ಸರಸ್ವತಿ ಹಿರೇಮಠ, ಅಕ್ಕಮ್ಮ ಡೇರೇದ, ಅಮರೇಶ ಹೋಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next