Advertisement

ಮಹಾಭಾರತದಲ್ಲಿ ನಾಗಾರ್ಜುನ ಕರ್ಣ

06:10 AM Sep 02, 2017 | Team Udayavani |

ಹೊಸದಿಲ್ಲಿ: ಸಾವಿರ ಕೋಟಿ ವೆಚ್ಚ ದಲ್ಲಿ ದುಬೈ ಮೂಲದ ಉದ್ಯಮಿ, ಮಂಗಳೂರಿನ ಬಿ.ಆರ್‌.ಶೆಟ್ಟಿ ಅವರು ನಿರ್ಮಿಸುತ್ತಿರುವ ಮಹಾಭಾರತ ಚಿತ್ರದ ಸೆಟ್‌ನಿಂದ ತಾಜಾ ಸುದ್ದಿಯೊಂದು ಹೊರಬಂದಿದ್ದು, ತೆಲುಗು ಚಿತ್ರರಂಗದಸೂಪರ್‌ ಸ್ಟಾರ್‌ ಅಕ್ಕಿನೇನಿ ನಾಗಾರ್ಜುನ ಕರ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಖಾತ್ರಿಯಾಗಿದೆ. 

Advertisement

“ಕರ್ಣನ ಪಾತ್ರದ ಬಗ್ಗೆ ನಿರ್ದೇಶಕ ಸುಕುಮಾರನ್‌ ನನ್ನೊಂದಿಗೆ ಚರ್ಚಿಸಿದ್ದಾರೆ. ಆದರೆ ಎಲ್ಲ ಪಾತ್ರಗಳೂ ಅಂತಿಮಗೊಂಡು ಚಿತ್ರ ನಿರ್ಮಾಣದ ತಯಾರಿ ಒಂದು ಹಂತಕ್ಕೆ ಬರಲು ಎಷ್ಟು ಸಮಯ ಹಿಡಿ ಯುತ್ತದೆ ಎಂದು ನಿಖರವಾಗಿ ಹೇಳಲಾಗದು,’ ಎಂದು ನಾಗಾರ್ಜುನ ಹೇಳಿದ್ದಾರೆ. ಎಲ್ಲವೂ ನಿರ್ದೇಶಕರ ಎಣಿಕೆಯಂತೆ ನಡೆದರೆ ಇದೇ ಮೊದಲ ಬಾರಿ ನಾಗಾರ್ಜುನ ಹಾಗೂ ಮೋಹನ್‌ ಲಾಲ್‌ ಬೆಳ್ಳಿ ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next