Advertisement

ನಾಗರಾಜು, ಪುತ್ರರಿಗೆ ಜಾಮೀನು

11:45 AM Sep 22, 2017 | Team Udayavani |

ಬೆಂಗಳೂರು: ಬ್ಲ್ಯಾಕ್‌ ಆಂಡ್‌ ವೈಟ್‌ ದಂಧೆ, ಅಪಹರಣ, ಸುಲಿಗೆ ಸೇರಿದಂತೆ ಏಳು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳಾಗಿ ಜೈಲು ಸೇರಿದ್ದ ಮಾಜಿ ಕಾರ್ಪೊರೇಟರ್‌ ವಿ.ನಾಗರಾಜು, ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

Advertisement

ಜಾಮೀನು ಕೋರಿ ನಾಗರಾಜು ಹಾಗೂ ಆತನ ಪುತ್ರರಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠ, ಮೂವರಿಗೂ ಅನ್ವಯವಾಗುವಂತೆ ತಲಾ  2 .ಲಕ್ಷ ರೂ.ಮೊತ್ತದ ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತಾ ಖಾತ್ರಿಯೊಂದಿಗೆ ಜಾಮೀನು ಮಂಜೂರು ಮಾಡಿದರು.

ಪ್ರತಿ ಗುರುವಾರ ಪ್ರಕರಣಗಳು ದಾಖಲಾಗಿರುವ ಹೆಣ್ಣೂರು, ಶ್ರೀರಾಂಪುರ, ಕೆಂಗೇರಿ ಪೊಲೀಸ್‌ ಠಾಣೆಗಳಿಗೆ ತೆರಳಿ ಸಹಿಹಾಕಬೇಕು. ಸಾಕ್ಷ್ಯಾಧಾರಗಳನ್ನು ನಾಶಪಡಿಸಬಾರದು. ಬೆಂಗಳೂರು ಬಿಟ್ಟು ತೆರಳದಂತೆ ಷರತ್ತು ಸಹ ವಿಧಿಸಲಾಗಿದೆ. ಅರ್ಜಿದಾರರ ಪರ ವಕೀಲ ಎನ್‌. ರವೀಂದ್ರ ಕಾಮತ್‌ ವಾದ ಮಂಡಿಸಿ, ನೋಟ್ಯಂತರದ ಬಳಿಕ ನಾಗರಾಜು ಮನೆಯಲ್ಲಿ ದೊರೆತ ಕಪ್ಪುಹಣದ ಸಂಬಂಧ ಕಾನೂನಿನಲ್ಲಿ ಬಂಧಿಸಲು ಅವಕಾಶವಿಲ್ಲ.

ಕೇವಲ ದಂಡ ವಿಧಿಸಿ ವಸೂಲು ಮಾಡಬೇಕು. ಆದಾಗ್ಯೂ ಆರೋಪಿಗಳನ್ನು ಬಂಧಿಸಿ ವಿವಿಧ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಆರೋಪಿಗಳ ವಿರುದ್ಧ ದಾಖಲಾಗಿದ್ದ ಬಹುತೇಕ ಪ್ರಕರಣಗಳು ಮುಕ್ತಾಯಗೊಂಡಿದ್ದು, 9 ಪ್ರಕರಣಗಳು ಭಾಗಿ ಉಳಿದಿದ್ದು ಈಗಾಗಲೇ 150 ದಿನಗಳಿಗೂ ಅಧಿಕ ಕಾಲ ಜೈಲುಶಿಕ್ಷೆ ಅನುಭವಿಸಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧ ಸಹಕಾರ ನೀಡಲಿದ್ದು, ಜಾಮೀನು ಮಂಜೂರು ಮಾಡುವಂತೆ ಕೋರಿದರು. 

Advertisement

Udayavani is now on Telegram. Click here to join our channel and stay updated with the latest news.

Next