Advertisement

Hubli; ಸರಕಾರದ ತುಷ್ಟೀಕರಣದ ನೀತಿಯಿಂದ ನಾಗಮಂಗಲ ಗಲಭೆ: ಪ್ರಹ್ಲಾದ ಜೋಶಿ

11:43 AM Sep 12, 2024 | Team Udayavani |

ಹುಬ್ಬಳ್ಳಿ: ನಾಗಮಂಗಲ ಘಟನೆಗೆ ಸರ್ಕಾರವೇ ನೇರ ಹೊಣೆಯಾಗಿದ್ದು, ಸರಕಾರದ ತುಷ್ಟೀಕರಣದ ನೀತಿಯಿಂದಾಗಿ ಗಲಭೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲಿ ಗಲಭೆ ಆಗಿವೆಯೋ ಅದು ಸರಕಾರದ ಸಂಪೂರ್ಣ ನಿರ್ಲಕ್ಷ್ಯ. ಇಂತಹ ಗಲಾಟೆಗಳನ್ನು ಸರ್ಕಾರ, ಇದನ್ನು ಹತ್ತಿಕ್ಕಬೇಕು. ಸರಕಾರದ ತುಷ್ಟೀಕರಣ ನೀತಿಯ ಪರಿಣಾಮವಾಗಿ ಗಲಭೆಯಾಗಿದೆ ಎಂದರು.

ಶಾಂತಿಯಿಂದ ಹೊರಟ ಮೆರವಣಿಗೆಯಲ್ಲಿ ಕಲ್ಲು ಹೊಡೆದಿದ್ದಾರೆ. ಗಣೇಶ ಮೂರ್ತಿ ಇದ್ದಾಗಲೂ ಕಲ್ಲು ಹೊಡೆದು ಬೆಂಕಿ ಹಚ್ಚಿದ್ದಾರೆ. ಸರಕಾರದ ಹಿಂದೂ ವಿರೋಧಿ ನೀತಿಯಿಂದ ಇಂತಹ ಘಟನೆಗಳು ಆಗುತ್ತಿವೆ‌. ಸರ್ಕಾರ ಮತ ಬ್ಯಾಂಕ್ ನೀತಿ ಅನುಸರಿಸದೆ ಸರಕಾರ ಮತಾಂಧ ಶಕ್ತಿಯನ್ನು ಹತ್ತಿಕ್ಕಬೇಕು. ಇದಕ್ಕೆಲ್ಲ ಸರ್ಕಾರವೇ ನೇರ ಹೊಣೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next