Advertisement

ಶಿವಾಜಿನಗರ ಮಹಿಳಾ ಠಾಣೆ ಅವ್ಯವಸ್ಥೆ ಕಂಡ ನಾಗಲಕ್ಷ್ಮೀ ಬಾಯಿ 

11:14 AM Jun 30, 2017 | Team Udayavani |

ಬೆಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಗುರುವಾರ ಶಿವಾಜಿನಗರ ಮಹಿಳಾ ಠಾಣೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳಾ ಠಾಣೆಯ ಕಟ್ಟಡ ಪರಿಶೀಲನೆ ನಡೆಸಿದ ಅವರು ಅಲ್ಲಿನ ಸಿಬ್ಬಂದಿ ಜತೆ ಸುಮಾರು ಒಂದು ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.

Advertisement

ಈ ವೇಳೆ ಠಾಣೆಯಲ್ಲಿರುವ ಇನ್‌ಸ್ಪೆಕ್ಟರ್‌ ಸೇರಿದಂತೆ 18 ಮಂದಿ ಮಹಿಳಾ ಸಿಬ್ಬಂದಿ ಮೂಲಸೌಕರ್ಯ, ಶಿಥಿಲಗೊಂಡ ಕಟ್ಟಡ ಹಾಗೂ ಉತ್ತಮ ಶೌಚಾಲಯ ಇಲ್ಲದಿರುವುದನ್ನು ನಾಗಲಕ್ಷ್ಮೀ ಬಾಯಿ ಗಮನಿಸಿದರು. ಇರುವ ಒಂದೇ ಶೌಚಾಲಯವನ್ನೆ ಸಿಬ್ಬಂದಿ ಹಾಗೂ ದೂರು ನೀಡಲು ಬರುವ ಮಹಿಳೆಯರು ಬಳಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ನಾಗಲಕ್ಷ್ಮೀಬಾಯಿ ಅವರು, ಮಹಿಳಾ ಠಾಣೆಯಲ್ಲಿರುವ ಅವ್ಯವಸ್ಥೆ ಬಗ್ಗೆ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆಯಲಾಗುವುದು. ನಗರದ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 10 ಮಹಿಳಾ ಠಾಣೆ ಸ್ಥಾಪಿಸಬೇಕು.

ಖಾಯಂ ಇನ್‌ಸ್ಪೆಕ್ಟರ್‌ಗಳನ್ನು ನೇಮಕ ಮಾಡಬೇಕು ಹಾಗೂ ಸದ್ಯ ಶಿವಾಜಿನಗರ ಮಹಿಳಾ ಠಾಣೆಗೆ ಇನ್ನು 17 ಮಂದಿ ಸಿಬ್ಬಂದಿ ಅಗತ್ಯವಿದ್ದು, ಕೂಡಲೇ ನಿಯೋಜಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಈ ವೇಳೆ ಮಹಿಳಾ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಅಂಜುಮಾಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next