Advertisement

ಪ್ರೀತಿ, ಗೀತಿ ಇತ್ಯಾದಿ…: ನೆಚ್ಚಿನವಾಡು ತೆಲುಗು ಸಿನಿಮಾ

05:29 PM Sep 24, 2023 | Team Udayavani |

ಕಥೆಯೊಂದನ್ನು ವಿವಿಧ ಆಯಾಮಗಳಲ್ಲಿ ಹೇಳುವ ಅವಕಾಶವಿರುವುದು ಪ್ರೇಮಕಥೆಗಳಿಗೆ ಮಾತ್ರ. ಅದನ್ನು ನೀವು ಯಾವ ರೀತಿ ಟ್ವಿಸ್ಟ್‌ ಟರ್ನ್ ಮಾಡಿ ಬೇಕಾದರೂ ಹೇಳಬಹುದು. ಈಗ ಬಹುತೇಕ ಕನ್ನಡದವರೇ ಸೇರಿಕೊಂಡು ಮಾಡಿರುವ “ನಚ್ಚಿನವಾಡು’ ಎಂಬ ತೆಲುಗು ಸಿನಿಮಾ ಕೂಡಾ ಒಂದು ಲವ್‌ಸ್ಟೋರಿ. ಲವ್‌ಸ್ಟೋರಿಯಾಗಿ ಆರಂಭವಾಗುವ ಈ ಸಿನಿಮಾದಲ್ಲಿ ಸೆಂಟಿಮೆಂಟ್‌, ಕಾಮಿಡಿ ಜೊತೆಗೊಂದು ಸಂದೇಶವನ್ನು ಸೇರಿಸಿ ಹೇಳಿದ್ದಾರೆ ನಿರ್ದೇಶಕ ಲಕ್ಷ್ಮಣ್‌ ಚಿನ್ನ.

Advertisement

ಸಾಫ್ಟ್ವೇರ್‌ ಉದ್ಯೋಗಿಯೊಬ್ಬನ ಕನಸಿನ ಮೂಲಕ ಆರಂಭವಾಗುವ ಸಿನಿಮಾ ಮುಂದೆ ಸಾಗುತ್ತಾ, ವಿವಿಧ ಮಜಲುಗಳನ್ನು ಪಡೆದುಕೊಳ್ಳುತ್ತದೆ. ಪ್ರೀತಿಸಿ ಮದುವೆಯಾಗಬೇಕೆಂಬ ಆತನ ಕನಸು, ಕುಟುಂಬದವರ ಒತ್ತಾಯ, ಕೊನೆಗೂ ಕನಸು ಕೈಗೂಡುವ ಸಮಯ, ಈ ಮಧ್ಯೆ ಒಂಚೂರು ಟ್ವಿಸ್ಟ್‌.. ಹೀಗೆ ಸಾಗುವ ಕಥೆ, ಆರಂಭದಲ್ಲಿ ಮಾಮೂಲಿಯಾಗಿ ಕಂಡರೂ ಮುಂದೆ ಸಾಗುತ್ತಾ, ಪ್ರೇಕ್ಷಕನನ್ನು ಕಥೆಯ ಜೊತೆ ಹೆಜ್ಜೆ ಹಾಕಿಸಲು ಪ್ರಯತ್ನಿಸುತ್ತದೆ.

ಲಕ್ಷ್ಮಣ್‌ ಚಿನ್ನ ಈ ಚಿತ್ರದ ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಕಾವ್ಯ ರಮೇಶ್‌ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್‌, ದರ್ಶನ್‌, ಪ್ರೇರಣಾ ಭಟ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next