Advertisement

ಕಳೆದ ವರ್ಷ ಕೈ ತೊರೆದು ಬಿಜೆಪಿ ಸೇರಿದ್ದ ಬಿರೇನ್‌ ಸಿಂಗ್‌ ಈಗ ಸಿಎಂ!

02:32 PM Mar 15, 2017 | Team Udayavani |

 ಇಂಪಾಲ: ಮಣಿಪುರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ನೊಂಗ್‌ತೊಂಬಮ್‌ ಬಿರೇನ್‌ ಸಿಂಗ್‌ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. 

Advertisement

ಇಂಪಾಲದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲೆ ನಜ್ಮಾ ಹೆಫ್ತುಲ್ಲಾ ಅವರು ಪ್ರಮಾಣ ವಚನ ಭೋದಿಸಿದರು. ಉಪಮುಖ್ಯಮಂತ್ರಿಯಾಗಿ ಮೈತ್ರಿ ಪಕ್ಷ ನಾಗಾ ಪೀಪಲ್ಸ್‌ ಪಾರ್ಟಿಯ ಜೋಯ್‌ ಕುಮಾರ್‌,ಸಂಪುಟ ದರ್ಜೆಯ ಸಚಿವರಾಗಿ ವಿಶ್ವಜಿತ್‌ ಸಿಂಗ್‌  ಅವರು ಪ್ರಮಾಣವಚನ ಸ್ವೀಕರಿಸಿದರು.

ಬಿರೇನ್‌ ಸಿಂಗ್‌ ಅವರು ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದು, ಡೆಮಾಕ್ರಟಿಕ್‌ ರೆಲಲೂಷನರಿ  ಪೀಪಲ್ಸ್‌ ಪಾರ್ಟಿಯ ಮೂಲಕ ರಾಜಕೀಯ ಆರಂಭಿಸಿ ಬಳಿಕ ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಕಾಂಗ್ರೆಸ್‌ನಿಂದ 3 ಬಾರಿ ಶಾಸಕರಾಗಿ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 2017 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ವಿರುದ್ಧ ಬಂಡೆದ್ದು ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. 

ಜೋಯ್‌ ಕುಮಾರ್‌ ಅವರು ಈ ಹಿಂದೆ ಮಣಿಪುರದ ಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದರಲ್ಲದೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಓಕ್ರಮ್‌ ಇಬೋಬಿ ಸಿಂಗ್‌ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಅಮಿತ್‌ ಶಾ, ನಾಯ್ಡು ಗೈರು 

Advertisement

ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣದಿಂದ ಇಂಪಾಲಕ್ಕೆ ತೆರಳುತ್ತಿದ್ದ ಅಮಿತ್‌ ಶಾ, ವೆಂಕಯ್ಯ ನಾಯ್ಡು ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್‌ ಲಾಲ್‌ ಅವರು ದೆಹಲಿಗೆ ವಾಪಾಸಾದರು. 

ಎಲ್‌ಜೆಪಿ ಮತ್ತು ಟಿಎಂಸಿಯ ತಲಾ ಓರ್ವ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದು ಅವರಿಗೂ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯುವ ಸಾಧ್ಯತೆಗಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next