Advertisement

Mysuru: ಕಾರು ಢಿಕ್ಕಿ: ಬೈಕಿನಲ್ಲಿದ್ದ ಮಗು ಸ್ಥಳದಲ್ಲೇ ಸಾವು; ಹೆತ್ತವರಿಗೆ ಗಂಭೀರ ಗಾಯ

01:02 AM Sep 24, 2024 | Team Udayavani |

ಮೈಸೂರು: ಬೈಕಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಹೆತ್ತವರೊಂದಿಗೆ ಸಾಗುತ್ತಿದ್ದ 5 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹುಣಸೂರು ರಸ್ತೆಯ ಇಲವಾಲದ ಪೆಟ್ರೋಲ್‌ ಬಂಕ್‌ ಬಳಿ ಸಂಭವಿಸಿದೆ. ಹೆತ್ತವರು ತೀವ್ರವಾಗಿ ಗಾಯಗೊಂಡಿದ್ದಾರೆ.

Advertisement

ಮೈಸೂರು ನಗರದ ಜನತಾ ನಗರದ ನಿವಾಸಿ ಬೈಕ್‌ ಸವಾರ ಅಭಿಷೇಕ್‌ – ದಿವ್ಯಶ್ರೀ ದಂಪತಿಯ ಪುತ್ರ ಲಿಖೇಶ್‌ (5) ಮೃತಪಟ್ಟಿರುವ ಬಾಲಕ. ಅಭಿಷೇಕ್‌ ಮತ್ತು ದಿವ್ಯಶ್ರೀ ಮಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದು, ಮಗುವನ್ನು ಊರಿನಲ್ಲಿ ಅಜ್ಜಿಯ ಜತೆಗೆ ಬಿಟ್ಟಿದ್ದರು. ವಾರಾಂತ್ಯದಲ್ಲಿ ಮಗುವನ್ನು ನೋಡಿಬರಲು ಊರಿಗೆ ತೆರಳಿದವರು ಮಗನ ಜತೆಗೆ ಬೈಕಿನಲ್ಲಿ ಮೈಸೂರು ನಗ ರದ ಕಡೆ ಬರುತ್ತಿದ್ದಾಗ ಹಿಂದಿನಿಂದ ಕಾರು ಢಿಕ್ಕಿ ಹೊಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next