Advertisement

ಕಳೆದುಹೋದ ಮರ್ಯಾದೆ ಮತ್ತೆ ಬರುವಂತೆ ದುರ್ಗಾ ದೇವಿಗೆ ಪತ್ರ ಬರೆದು ಬೇಡಿಕೊಂಡ ಭಕ್ತ!

03:28 PM Feb 24, 2021 | Team Udayavani |

ಗಂಗಾವತಿ: ಕಳೆದುಹೋದ ಮಾನ ಮರ್ಯಾದೆ ಮತ್ತೆ ಬರಲು ಆಶೀರ್ವಾದ ಮಾಡುವಂತೆ ಭಕ್ತನೋರ್ವ ಗಂಗಾವತಿ ಗ್ರಾಮದೇವತೆ ದುರುಗಮ್ಮ ಹುಂಡಿಗೆ ಕಾಣಿಕೆ ಸಮೇತ ಪತ್ರ ಬರೆದು ಹಾಕಿದ್ದಾನೆ.

Advertisement

ದೇವತೆಯ ಕಾಣಿಕೆ ಹುಂಡಿ ಎಣಿಕೆಯ ಸಂದರ್ಭದಲ್ಲಿ ಪತ್ರ ಕಂಡು ಬಂದಿದ್ದು ಏಲಕ್ಕಿ ಚಕ್ಕಿ ಸಮೇತ ಪತ್ರಕ್ಕೆ ಅರಿಷಿಣ ಕುಂಕುಮ ಹಚ್ಚಿ ಪತ್ರವನ್ನು ಹುಂಡಿಯಲ್ಲಿ ಹಾಕಿದ್ದಾರೆ. ಸಿದ್ದಾಪುರದಲ್ಲಿ‌ ಪ್ಲಾಟ್ ಮಾರಾಟವಾಗಲಿ, ಅಕ್ಕ, ಅಣ್ಣ ತಮ್ಮನ ಮದುವೆಯಾಗಲಿ,  ಕೋರ್ಟಿನಲ್ಲಿರುವ ಕೇಸ್ ಗೆದ್ದು ಹೊಲದ ಹಣ ಬೇಗನೆ ಬರಲಿ, ಕುಟುಂಬ ಕಷ್ಟದಿಂದ ಬೇಗನೆ ಹೊರಗೆ ಬರಲಿ ಎಂದು‌ ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ:ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

ಬುಧವಾರ ಹುಂಡಿಯ ಹಣ ಎಣಿಕೆ ಮಾಡಲಾಗಿದ್ದು ಒಟ್ಟು 2,10,070 ರೂ ಸಂಗ್ರಹವಾಗಿದೆ. ಕಳೆದ 5 ತಿಂಗಳ ಹಿಂದೆ ಹುಂಡಿ ಎಣಿಕೆ ಸಂದರ್ಭದಲ್ಲಿ 2,17.000 ರೂ ಹಣ ಸಂಗ್ರಹವಾಗಿತ್ತು.

Advertisement

ಹುಂಡಿ ಎಣಿಕೆ ಸಂದರ್ಭದಲ್ಲಿ ಜೋಗದ ನಾರಾಯಣಪ್ಪ, ಬಿ.ಅಶೋಕ, ಬಿಚ್ಚಾಲಿ ಮಲ್ಲಿಕಾರ್ಜುನ, ವಾಮರಜ್ಯೋತಿ ವೆಂಕಟೇಶ ಗೀತಾವಿಕ್ರಂ ಸೇರಿ ಅನೇಕರಿದ್ದರು.

ಇದನ್ನೂ ಓದಿ:‘ಬಿಗ್ ಬಾಸ್ ಮನೆಗೆ ಎಂಟ್ರಿ’ …ನಿರ್ದೇಶಕ ರವಿ ಶ್ರೀವತ್ಸ ಹೇಳಿದ್ದೇನು ?

Advertisement

Udayavani is now on Telegram. Click here to join our channel and stay updated with the latest news.

Next