Advertisement

ಎರಡನೇ ದಿನವೂ ಮೈಸೂರು ಸ್ತಬ್ಧ

04:41 PM Apr 26, 2021 | Team Udayavani |

ಮೈಸೂರು: ವಾರಾಂತ್ಯ ಕರ್ಫ್ಯೂ ಎರಡನೇ ದಿನವಾದ ಭಾನುವಾರ ಮೈಸೂರು ಸಂಪೂರ್ಣ ಸ್ತಬ್ಧವಾಗಿತ್ತು. ನಾಗರಿಕರು ಮನೆಯಿಂದ ಹೊರಬರದೆಸಹಕರಿಸಿದರು.

Advertisement

ಕರ್ಫ್ಯೂ ನಡುವೆಯೂ ಶೇ.05ರಷ್ಟು ವಾಹನಗಳು ಸಂಚಾರ ನಡೆಸಿದವು.ಶನಿವಾರ ವಾಹಗಳ ಸಂಚಾರಕ್ಕೆ ಪೊಲೀಸರುನಿರ್ಬಂಧಿಸಿದ್ದರು. ಅನಗತ್ಯವಾಗಿ ಓಡಾಡುವವರಿಗೆತಪಾಸಣೆ ನಡೆಸಿ ಬಿಸಿ ಮುಟ್ಟಿಸಿದ್ದರು. ಆದರೆ,ಫ‌ುಡ್‌ ಡೆಲವರಿ ಸೇರಿದಂತೆ ತುರ್ತು ಕೆಲಸಗಳಿಗಾಗಿ ದ್ವಿಚಕ್ರ ವಾಹನ ಸೇರಿದಂತೆ ಇತರೆ ವಾಹನಗಳು ಸಂಚರಿಸಿದರು.

ಬ್ಯಾರಿಕೇಡ್‌ ಅಳವಡಿಸಿದ್ದರೂಸಂಚಾರಕ್ಕೆ ಅಡ್ಡಿಯಿರಲಿಲ್ಲ. ಪೊಲೀಸರು ಯಾರನ್ನೂತಡೆಯಲಿಲ್ಲ. ಕೆಲವರು ಅನಗತ್ಯವಾಗಿ ನಗರಪ್ರದೇಶದಲ್ಲಿ ಸಂಚರಿಸುವುದು ಕಂಡು ಬಂದಿತು.

ತರಕಾರಿ ಖರೀದಿಗೆ ಅಡ್ಡಿಯಿಲ್ಲ: ಬೆಳಗ್ಗೆ 10ಗಂಟೆಯವರೆಗೆ ಹಣ್ಣು, ತರಕಾರಿ, ದಿನಸಿ, ಹೂವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಜನರು ಇತ್ತಕಡೆ ಸುಳಿಯಲಿಲ್ಲ. ಆದರೆ ಬೋಟಿ ಬಂಜಾರ್‌ನಲ್ಲಿಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಮಾಂಸ ಖರೀದಿಸಿದರು. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಮಾಂಸಮಾರಾಟಕ್ಕೆ ನಗರ ಪಾಲಿಕೆ ನಿಷೇಧ ಹೇರಿತ್ತು.

ಚಿಕ್ಕಗಡಿಯಾರ ವೃತ್ತದಲ್ಲಿ ಭಾನುವಾರವೂಸಾರ್ವಜನಿಕರು ಕೋವಿಡ್‌ ಪರೀಕ್ಷೆಗೆ ಒಳಗಾದರು.ಹಳೇ ಅಗ್ರಹಾರದಲ್ಲಿರುವ ನಗರ ಪ್ರಾಥಮಿಕಆರೋಗ್ಯ ಕೇಂದ್ರದಲ್ಲಿ 45 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು ಕೋವಿಡ್‌ ಲಸಿಕೆ ಪಡೆದರು.

Advertisement

ಶನಿವಾರ ಗ್ರಾಮಾಂತರ ಮತ್ತು ನಗರ ಬಸ್‌ನಿಲ್ದಾಣದಿಂದ ವಿವಿಧೆಡೆಗೆ ಬಸ್‌ಗಳುಪಯಣಿಸಿದ್ದವು. ಆದರೆ, ಭಾನುವಾರ ನಗರ ಸಾರಿಗೆಬಸ್‌ ನಿಲ್ದಾಣದಲ್ಲಿ ಒಂದೂ ಬಸ್‌ ಇರಲಿಲ್ಲ.ನಿಲ್ದಾಣ ಪೂರ್ಣ ಸ್ತಬ್ಧವಾಗಿತ್ತು. ಗ್ರಾಮಾಂತರ ಬಸ್‌ನಿಲ್ದಾಣವೂ ಖಾಲಿಯಾಗಿತ್ತು. ನಗರದ ಕೆಲವುಹೋಟೆಲ್‌ಗ‌ಳು ತಿಂಡಿ, ಆಹಾರವನ್ನು ಪಾರ್ಸೆಲ್‌ನೀಡಿದವು

Advertisement

Udayavani is now on Telegram. Click here to join our channel and stay updated with the latest news.

Next