Advertisement

ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ಕೊಲೆ : ಪೊಲೀಸರಿಂದ ಮೂವರು ಆರೋಪಿಗಳ ಸೆರೆ

12:24 PM Jan 09, 2021 | Team Udayavani |

ಮೈಸೂರು: ಮನೆ ಮುಂದೆ ಓಡಾಡುವಾಗ ವಿನಾಕಾರಣ ತೊಂದರೆ ಕೊಡುತ್ತಿದ್ದರೆಂದು ಅಪ್ಪ ಮತ್ತು ಮಗನನ್ನು ಕೊಲೆ
ಮಾಡಿದ್ದ ಮೂವರು ಆರೋಪಿಗಳನ್ನು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Advertisement

ಮೈಸೂರು ತಾಲೂಕು ಮಂಡಕಳ್ಳಿ ನಿವಾಸಿ ಲೇ. ಹೆಬ್ಟಾಳೇಗೌಡ ಎಂಬವರ ಪುತ್ರ ಮರಿಕೋಟೆಗೌಡ (48) ಮತ್ತು ಅವರ
ಪುತ್ರ ಸತೀಶ್‌ಕುಮಾರ್‌ (25) ಕೊಲೆಯಾದವರು. ಈ ಇಬ್ಬರ ಹತ್ಯೆ ಸಂಬಂಧ ಅದೇ ಗ್ರಾಮದ ನಿವಾಸಿಗಳಾದ ಮಂಜುನಾಥ್‌
(22), ಮಹದೇವಸ್ವಾಮಿ (22) ಮತ್ತು ಸತೀಶ್‌ (22) ಎಂಬುವವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸ್ಪಂದಿಸಲಿ : ಒಕ್ಕೂಟದ ಅಧ್ಯಕ್ಷ ಎಚ್‌.ಟಿ.ಮೋಹನ್‌ ಆತಂಕ

ಸತೀಶ್‌ಕುಮಾರ್‌ ಡಿ.26ರ ರಾತ್ರಿ ತನ್ನ ಸ್ನೇಹಿತನಿಗೆ ಪ್ಯಾನ್‌ ಕಾರ್ಡ್‌ ಕೊಟ್ಟು ಬರಲು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದನು.
ಈತನನ್ನು ಹಿಂಬಾಲಿಸಿಕೊಂಡು ಹೋದ ಆರೋಪಿಗಳು, ಬಂಡಿ ಪಾಳ್ಯ ಎಪಿಎಂಸಿ ಮುಂಭಾಗದ ಪೊದೆ ಬಳಿ ಮೂತ್ರ ವಿಸರ್ಜನೆ
ಮಾಡಲು ನಿಂತಿದ್ದ ಸತೀಶ್‌ಕುಮಾರ್‌ ಮೇಲೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ಪೊದೆಯೊಳಗೆ ಬಿಸಾಡಿದ್ದರು. ಈ
ಸಂಬಂಧ ಮರಿಕೋಟೆಗೌಡ ತಮ್ಮ ಪುತ್ರ ಸತೀಶ್‌ಕುಮಾರ್‌ ಕಾಣೆಯಾಗಿರುವುದಾಗಿ ಮೈಸೂರು ದಕ್ಷಿಣ ಪೊಲೀಸ್‌
ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಗೆಯೇ, ಮರಿಕೋಟೆಗೌಡ ಮೈಸೂರಿನ ಮಹದೇವಪುರದಿಂದ ಮಂಡಕಳ್ಳಿಗೆ ಹೋಗುವ ಮಾರ್ಗ ಮಧ್ಯೆಯ ಕಾಲುವೆ
ಬಳಿ ಜ.2ರಂದ ಬೆಳಗ್ಗೆ ಅಡ್ಡಗಟ್ಟಿರುವ ಆರೋಪಿಗಳು ದೊಣ್ಣೆಯಿಂದ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ಶುಕ್ರವಾರ
ಬೆಳಗ್ಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮರಿಕೋಟೆಗೌಡ ಕೊಲೆ ಪ್ರಕರಣದ ವಿಚಾರಣೆ ನಡೆಸಿದಾಗ ಆರೋಪಿಗಳು ಮರಿಕೋಟೆಗೌಡ, ಪುತ್ರ ಸತೀಶ್‌ಕುಮಾರ್‌ನನ್ನು ಸಹ ಕೊಲೆ ಮಾಡಿದ್ದ ವಿಚಾರವನ್ನು ಬಾಯಿಬಿಟ್ಟಿದ್ದಾರೆ.

Advertisement

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬಂಡಿಪಾಳ್ಯ ಎಪಿ ಎಂಸಿ ಮುಂಭಾಗದಲ್ಲಿ ಪೊದೆಯಲ್ಲಿದ್ದ ಸತೀಶ್‌ಕುಮಾರ್‌ ಮೃತ
ದೇಹವನ್ನು ಪೊಲೀಸರು ಶವಾಗಾರಕ್ಕೆ ಸಾಗಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next