Advertisement

ಮೈಸೂರು:ನಾಪತ್ತೆಯಾಗಿದ್ದ ತಾಯಿ ಮಗಳ ಶವಗಳು ಕೆರೆಯಲ್ಲಿ ಪತ್ತೆ

04:11 PM Aug 18, 2017 | Team Udayavani |

ಮೈಸೂರು: ಇಲ್ಲಿನ ಕುವೆಂಪು ನಗರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ತಾಯಿ ಮತ್ತು ಮಗಳು ಶುಕ್ರವಾರ ಶವಗಳಾಗಿ ಪತ್ತೆಯಾಗಿದ್ದಾರೆ. 

Advertisement

ಸ್ಪೂರ್ತಿ ಮತ್ತು ಆಕೆಯ ಪುತ್ರಿ ಹೇಮಾನಿ ಕುಕ್ಕರಳ್ಳಿಯ ಕೆರೆಯಲ್ಲಿ ಶವಗಳಾಗಿ ಪತ್ತೆಯಾಗಿದ್ದು, ಪತಿ ಯೋಗಾನಂದ್‌ ಅವರು ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಯೋಗಾನಂದ್‌ ಮತ್ತು ಸ್ಪೂರ್ತಿ ಇಬ್ಬರಿಗೂ ಇದು 2 ನೇ ವಿವಾಹ ಎಂದು ತಿಳಿದು ಬಂದಿದೆ. ಯೋಗಾನಂದ್‌ ಪತ್ನಿ ಸ್ಪೂರ್ತಿ ಮತ್ತು ಆಕೆಯ ಮೊದಲ ಪತಿಯ ಮಗಳು ಹೇಮಾನಿಯನ್ನು  ಕೊಲೆಗೈದು ಕೆರೆಯಲ್ಲಿ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

ಯೋಗಾನಂದ್‌ ನಾಪತ್ತೆ ಕತೆ ಕಟ್ಟಿ ವಿದೇಶಕ್ಕೆ ಪರಾರಿಯಾಗಲು ಸಂಚು ಹೂಡಿದ್ದ ಎಂದು ಹೇಳಲಾಗಿದ್ದು, ತನ್ನ ಕಚೇರಿಯಲ್ಲಿ ಯುವತಿಯೊಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಸ್ಪೂರ್ತಿಯ ಪೋಷಕರು ಆರೋಪ ಮಾಡಿದ್ದಾರೆ. 

ಕುವೆಂಪುನಗರ ಪೊಲೀಸರು ಸ್ಥಳಕ್ಕಾಗಮಿಸಿ ಶವಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next