Advertisement

ಸ್ನೇಹಿತನ ಹತ್ಯೆಯ ದ್ವೇಷ: ಕೊಲೆ ಆರೋಪಿಯ ತಮ್ಮನನ್ನು ಇರಿದು ಹತ್ಯೆ

08:24 AM May 09, 2020 | keerthan |

ಮೈಸೂರು: ಸ್ನೇಹಿತನನ್ನು ಕೊಲೆ ಮಾಡಿದ್ದ ಹಿನ್ನೆಲೆ ಮೃತನ ಸ್ನೇಹಿತರು, ಕೊಲೆಗಾರನೊಬ್ಬನ ಸಹೋದರನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಮೂಲಕ ಕೊಲೆ ಮಾಡಿದ ಯುವಕನ ಸೋದರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

Advertisement

ಕ್ಯಾತಮಾರನಹಳ್ಳಿಯ ನಿವಾಸಿ ಅಭಿಷೇಕ್ (22) ಮೃತ ಯುವಕ. ಮೈಸೂರಿನ ಗಾಯತ್ರಿಪುರಂನ ಚರ್ಚ್ ಮೈದಾನದ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ.

ಈತನನ್ನು ಅದೇ ಬಡಾವಣೆಯ ನಿವಾಸಿಗಳಾದ ಮಹೇಂದ್ರ ಮತ್ತುಇರ್ಫಾನ್ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕಳೆದ ಸೋಮವಾರ ಕ್ಷುಲ್ಲಕ ವಿಚಾರಕ್ಕೆ ಸತೀಶ್ ಎಂಬಾತನ ಕೊಲೆಯಾಗಿತ್ತು.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಠಾಣೆ ಪೊಲೀಸರು, ಕೊಲೆ ಮಾಡಿದ ಕಿರಣ್ ಮತ್ತು ಮಧು ಎಂಬಾತನ್ನು ಕಾರ್ಯಾಚರಣೆ ನಡೆಸಿ  ಬಂಧಿಸಿ ಜೈಲಿಗಟ್ಟಿದ್ದರು.

ಸತೀಶ್ ನ ಕೊಲೆಗೆ ಪ್ರತಿಕಾರ ತೆಗೆದುಕೊಳ್ಳಲು ನಿರ್ಧರಿಸಿದ ಸ್ನೇಹಿತರಾದ ಮಹೇಂದ್ರ ಮತ್ತು ಇರ್ಫಾನ್, ನರಸೀಪುರದಲ್ಲಿ ಇದ್ದ ಬಂಧಿತ ಕಿರಣ್‍ನ ಸೋದರ ಅಭಿಷೇಕ್‍ನನ್ನು ಮೈಸೂರಿಗೆ ಮಾತನಾಡಲು ಕರೆಯಿಸಿಕೊಂಡಿದ್ದಾರೆ. ಅಭಿಷೇಕ್ ಗಾಯತ್ರಿಪುರಂ ಮೈದಾನದ ಬಳಿ ರಾತ್ರಿ 8 ಗಂಟೆ ಸಮಯದಲ್ಲಿ ಬಂದಾಗ ದಾಳಿ ನಡೆಸಿದ ಮಹೇಂದ್ರ ಮತ್ತು ಇರ್ಫಾನ್, ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

Advertisement

ವಿಷಯ ತಿಳಿದು ಸ್ಥಳಕ್ಕೆ ನಜರ್‍ಬಾದ್ ಠಾಣೆ ಪೊಲೀಸರು ಆಗಮಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಸಂಬಂಧ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next