Advertisement

ಅರಸೊತ್ತಿಗೆಯ ನಾಡಹಬ್ಬದಿಂದ ದಸರೆ ವೈಭವದ ಹೆಜ್ಜೆ ಗುರುತುಗಳು

11:47 AM Oct 14, 2021 | Team Udayavani |
- ಮೈಸೂರು ಸುರೇಶ್‌ಅಂದು ಮಹಾನವಮಿ ದಿಬ್ಬದಲ್ಲಿ ಹಾಗೂ ವಿಜಯ ವಿಠಲ ದೇವಾಲಯವನ್ನೆ ಕೇಂದ್ರವನ್ನಾಗಿಸಿಕೊಂಡು ದಸರೆ ಉತ್ಸವ ನಡೆಯುತ್ತಿತ್ತು. ಇಂತಹ ದಸರೆ ಉತ್ಸವ ದೇಶದಲ್ಲಿಯೇ ಏಕೆ? ವಿದೇಶದಲ್ಲಿಯೂ ಸಹ ಹೆಸರುವಾಸಿಯಾಗಿತ್ತು ಎನ್ನುತ್ತಾರೆ ಇತಿಹಾಸತಜ್ಞರು. ಹಂಪೆಯ ದಸರೆ ಕುರಿತು ಇಟಲಿಯ ಪ್ರವಾಸಿ ನಿಕೋಲೋ ಡೆ ಕೋಂಟಿ, ರಷಿಯಾದ ಅಲ್ಬರೋನಿ, ಅಬ್ದುಲ್‌ ರಜಾಕ್‌, ಪೋರ್ಚುಗೀಸ್‌ ಯಾತ್ರಿಕ ಡೋಮಿಂಗೋ ಪಾಯಸ್‌ ತಮ್ಮ ಪ್ರವಾಸ ಕಥನದಲ್ಲಿ ವಿವರಿಸಿದ್ದಾರೆ. ಅಂದಿನ ದಸರೆಯ ಝಲಕ್‌ಗಳನ್ನು ಹಜಾರ ರಾಮ ದೇವಾಲಯದ ಗೋಡೆಯಲ್ಲಿ ಕೆತ್ತಲಾಗಿ ರುವ ಶಿಲ್ಪಕಲೆಯಲ್ಲಿ ಈಗಲೂ ಕಾಣಬಹುದು...
Now pay only for what you want!
This is Premium Content
Click to unlock
Pay with

– ಮೈಸೂರು ಸುರೇಶ್‌

Advertisement

ಮೈಸೂರು ದಸರೆ ಅಂದರೆ ಅಬ್ಟಾ ! ಅದೊಂದು ಪದಗಳಿಗೆ ನಿಲುಕದ ಸಂಭ್ರಮದ ಉತ್ಸವ. ಪ್ರಜಾತಂತ್ರದಲ್ಲಿರುವ ನಮಗೆ ಅರಸೊತ್ತಿಗೆಯ ಗತ್ತು ಗೈರತ್ತನ್ನು ಪರಿಚಯಿಸುವ ಉತ್ಸವವಾದರೆ, ನಾಡಿನ ಜನರಿಗೆ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯನ್ನು ಕುಳ್ಳ ರಿಸಿ ನಡೆಸುವ ಜಂಬೂಸವಾರಿ, ಜನಪರ ಯೋಜನೆಗಳು, ಐತಿಹಾಸಿಕ ಸ್ಥಳಗಳ ಟ್ಯಾಬ್ಲೋ ಪರಿಚಯಿಸುವ ಸರಕಾರದ ವಿವಿಧ ಇಲಾಖೆಗಳಿಗೆ ಅದು ಪ್ರಜಾತಂತ್ರ ಮೆರವಣಿಗೆ, ಬಗೆ ಬಗೆಯ ಉಡುಗೆ ತೊಡುಗೆ ತೊಟ್ಟು ದಸರೆ ಮೆರವಣಿಗೆಯಲ್ಲಿ ತಮ್ಮ ಕಲಾ ಪ್ರಕಾರ ಪ್ರದರ್ಶಿ ಸುವ ನಾಡಿನ ಮೂಲೆ ಮೂಲೆಯ ಜನಪದ ಕಲಾತಂಡಗಳಿಗೆ ಅದು ಮಹಾನವಮಿ. ಹೀಗೆ ನಾಡಹಬ್ಬ ದಸರೆ ಪದಗಳಿಗೆ ನಿಲುಕದ, ಪ್ರಾಸಗಳಿಗೆ ಮೀರಿದ ಸಂಭ್ರ ಮದ ಮಹೋತ್ಸವ. ಅದನ್ನು ನೋಡಿ, ಅನುಭವಿಸಿಯೇ ಆಸ್ವಾದಿಸಬೇಕು.

ಇಂತಹ ದಸರೆ ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ ಎನ್ನುವುದು ವಿಶೇಷ. 14 ಮತ್ತು 15ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪೆಯಲ್ಲಿ ದಸರೆ ನಡೆಯುತ್ತಿದ್ದ ಬಗ್ಗೆ ಪುರಾವೆಗಳಿವೆ. ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ವಿಜಯ ದಶಮಿ ಮಹೋತ್ಸವ ಉತ್ತುಂಗಕ್ಕೇರಿತ್ತು. ಇಡೀ ವಿಜಯ ನಗರ ಸಾಮ್ರಾಜ್ಯದ ವೈಭೋಗ, ಸಿರಿ, ಸಂಪತ್ತು, ಕಲೆ ತೋರ್ಪಡಿಸುವ ಉತ್ಸವವಾಗಿ, ಅರಸರ ಸೈನ್ಯದ ಶೌರ್ಯ ಪ್ರದರ್ಶನದ ವೇದಿಕೆಯಾಗಿ ದಸರೆ ಆಚರಣೆ ನಡೆಯುತ್ತಿತ್ತು. ಇದರಲ್ಲಿ ಆನೆಗಳು, ಅಶ್ವಗಳು, ಶಸ್ತ್ರಸಜ್ಜಿತ ಸೈನಿಕರು ಭಾಗವಹಿಸು ತ್ತಿದ್ದರು. ಈಗಿನ ದಸರೆ ಸಹ ಬಹುಭಾಗವಾಗಿ ಇದನ್ನು ಉಳಿಸಿ ಕೊಂಡು ಕಾಲಕಾಲಕ್ಕೆ ಸುಧಾರಣೆಗೊಳ ಗಾಗಿ ಮುಂದುವರೆದಿದೆ.

ಅಂದು ಮಹಾನವಮಿ ದಿಬ್ಬದಲ್ಲಿ ಹಾಗೂ ವಿಜಯ ವಿಠಲ ದೇವಾಲಯವನ್ನೆ ಕೇಂದ್ರವನ್ನಾಗಿಸಿಕೊಂಡು ದಸರೆ ಉತ್ಸವ ನಡೆಯುತ್ತಿತ್ತು. ಇಂತಹ ದಸರೆ ಉತ್ಸವ ದೇಶದಲ್ಲಿಯೇ ಏಕೆ? ವಿದೇಶದಲ್ಲಿಯೂ ಸಹ ಹೆಸರುವಾಸಿಯಾಗಿತ್ತು ಎನ್ನುತ್ತಾರೆ ಇತಿಹಾಸತಜ್ಞರು. ಹಂಪೆಯ ದಸರೆ ಕುರಿತು ಇಟಲಿಯ ಪ್ರವಾಸಿ ನಿಕೋಲೋ ಡೆ ಕೋಂಟಿ, ರಷಿಯಾದ ಅಲ್ಬರೋನಿ, ಅಬ್ದುಲ್‌ ರಜಾಕ್‌, ಪೋರ್ಚುಗೀಸ್‌ ಯಾತ್ರಿಕ ಡೋಮಿಂಗೋ ಪಾಯಸ್‌ ತಮ್ಮ ಪ್ರವಾಸ ಕಥನದಲ್ಲಿ ವಿವರಿಸಿದ್ದಾರೆ. ಅಂದಿನ ದಸರೆಯ ಝಲಕ್‌ಗಳನ್ನು ಹಜಾರ ರಾಮ ದೇವಾಲಯದ ಗೋಡೆಯಲ್ಲಿ ಕೆತ್ತಲಾಗಿ ರುವ ಶಿಲ್ಪಕಲೆಯಲ್ಲಿ ಈಗಲೂ ಕಾಣಬಹುದು.

ಇದನ್ನೂ ಓದಿ:ಕೇಂದ್ರೀಯ ವಿದ್ಯಾಲಯ ಕಟ್ಟಡ ತೆರವಿಗೆ ಕೊಕ್‌ 

Advertisement

ದಸರೆ ಪ್ರಮುಖ ಆಕರ್ಷಣೆ ಜಂಬೂಸವಾರಿ: ಅಶ್ವಿ‌ಜ ಮಾಸ ಪಾಡ್ಯದ ದಿನ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅಧಿಕೃತವಾಗಿ ನಾಡಹಬ್ಬಕ್ಕೆ ಚಾಲನೆ ದೊರೆಯುತ್ತದೆ. ಅಮ್ಮ ವಿಲಾಸ ಅರಮನೆ ಯಲ್ಲಿ ನವರಾತ್ರಿ ಪೂಜೆ ಪುನಸ್ಕಾರಗಳು ಆರಂಭಗೊಳ್ಳುತ್ತವೆ, ರತ್ನಖಚಿತ ಸಿಂಹಾಸನವನ್ನು ಪೂಜೆ ಮಾಡಿ ರಾಜವಂಶಸ್ಥರು (ಈಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌) ಸಿಂಹಾಸನವೇರಿ ಖಾಸಗಿ ದರ್ಬಾ ರು ನಡೆಸುತ್ತಾರೆ. ಅರಮನೆಯ ಹೊರಗೆ ಸಂಗೀತ ಕಾರ್ಯ ಕ್ರಮಗಳು ನಡೆಯುತ್ತವೆ, ಮೈಸೂರಿನ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ನವರಾತ್ರಿಯ 9ನೇ ದಿನ ಅರಮನೆಯ ಶಸ್ತ್ರಾಸ್ತ್ರ ಭಂಡಾರದಲ್ಲಿ ಆಯುಧ ಪೂಜೆ ನಡೆಯುತ್ತದೆ. ಹತ್ತನೇ ದಿನ ವಿಜಯದಶಮಿ ಯಂದು 770 ಕೆ.ಜಿ. ಚಿನ್ನದ ಅಂಬಾರಿಯನ್ನೊತ್ತ ಜಂಬೂ ಸವಾರಿ ಒಳಗೊಂಡಂತೆ ದಸರೆ ಮೆರವಣಿಗೆ ಮೈಸೂರಿನ ರಾಜಬೀದಿಗಳಲ್ಲಿ ನಡೆಯುತ್ತದೆ. ನಂದಿಕಂಬಕ್ಕೆ ಪೂಜೆ ಸಲ್ಲಿಸಿ ನಾಡಿನ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿಗಳು ದಸರೆ ಮೆರವಣಿಗೆಗೆ ಚಾಲನೆ ನೀಡುವುದು ನಡೆದು ಬಂದಿರುವ ಪರಂಪರೆ. ಅಮ್ಮ ವಿಲಾಸದಿಂದ ಹೊರಡುವ ದಸರೆ ಮೆರವಣಿಗೆ ಸಯ್ನಾಜಿರಾವ್‌ರಸ್ತೆ ಮೂಲಕ ಬನ್ನಿಮಂಟಪಕ್ಕೆ ಸಾಗಿ ಅಂತ್ಯಗೊಳ್ಳುತ್ತದೆ. ಸಂಜೆ ರಾಜ್ಯ ಪಾಲರ ಸಮ್ಮುಖದಲ್ಲಿ ಪಂಜಿನ ಕವಾಯಿತು ನಡೆದು ದಸರೆಗೆ ತೆರೆ ಬೀಳುತ್ತದೆ.

ದಸರೆ ಎಷ್ಟರಮಟ್ಟಿಗೆ ಜನ ಮುಖಿಯಾಗಿದೆ ಎಂದರೆ ಮೈಸೂರಿನಲ್ಲಿ ದಸರೆಯ ಹತ್ತು ದಿನಗಳು ಕೂಡ ಬಗೆ ಬಗೆಯ ದಸರೆಗಳು ನಡೆಯುತ್ತವೆ. ಚಿಣ್ಣರ ದಸರಾ, ಯುವದಸರಾ, ರೈತದಸರಾ, ಮಹಿಳಾ ದಸರಾ, ಆರೋಗ್ಯಕ್ಕಾಗಿ ಯೋಗದಸರಾ ಹೀಗೆ ವಿವಿಧ ಆಯಾಮಗಳಲ್ಲಿ ದಸರೆ ಕಾರ್ಯಕ್ರಮಗಳು ನಡೆದು ದಸರೆ ಜನಮುಖಿಯಾಗಿದೆ.

ಇತಿಹಾಸದ ಪುಟಗಳಲ್ಲಿ ಮೈಸೂರಿನ ವರ್ಣನೆ!: ಮೈಸೂರಿನ ಅರಸರ ಇತಿಹಾಸ, ದಸರೆ ವರ್ಣ ನೆಗೆ ಮುನ್ನ ಮೈಸೂರು ಇತಿಹಾಸ ತಿಳಿಯಲೇಬೇಕು. ವಿಶ್ವದ ಭೂಪಟದಲ್ಲಿ ಇಂದು ಮೈಸೂರಿಗೆ ಸ್ಥಾನಮಾನ ಇದ್ದರೆ ಅದು ಮೈಸೂರಿನ ಸಾಂಸ್ಕೃತಿಕ ಶ್ರೀಮಂತಿಕೆಯಿಂದಾಗಿ. ಇಂತಹ ಸಾಂಸ್ಕೃತಿಕ ಶ್ರೀಮಂತಿಕೆ ಒಂದೇ ದಿನಕ್ಕೆ ಬಂದಿದ್ದಿಲ್ಲ, ಅದು ನೂರಾರು ವರ್ಷಗಳಿಂದ ನಡೆದು ಕೊಂಡು ಬಂದಿರುವ ಸಾಂಸ್ಕೃತಿಕ ಬಳುವಳಿ ಆಗಿದೆ. ಆದ್ದರಿಂದಲೇ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿ ಮೈಸೂರು ಪ್ರಸಿದ್ಧಿ ಪಡೆದಿದೆ.

ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಮೈಸೂರಿನ ಕುರಿತು ನಮಗೆ ಸಾಮ್ರಾಟ ಅಶೋಕನ ಕಾಲದಿಂದಲೂ ಮಾಹಿತಿ ಸಿಗುತ್ತದೆ. ಅಶೋಕನ ಕಾಲದಲ್ಲಿ ಮೈಸೂರನ್ನು ಮಹಿಷ ಮಂಡಲ ಎಂದು ಕರೆಯಲಾಗುತ್ತಿತ್ತು. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಮಹದೇವನನ್ನು ಮಹಿಷಮಂಡಲಕ್ಕೆ ಅಶೋಕ ಕಳುಹಿಸಿದನು ಎಂಬ ಮಾಹಿತಿಯು ಬೌದ್ಧ ಧರ್ಮ ಗ್ರಂಥಗಳಾದ ಮಹಾವಂಸ ಮತ್ತು ದೀಪವಂಸಗಳಲ್ಲಿ ಉಲ್ಲೇಖೀಸಲಾಗಿದೆ. ಪುರಾತನ ಗ್ರೀಕ್‌ಭೂಗೋಳತಜ್ಞ ಟಾಲೇಮಿ ಮೈಸೂರನ್ನು “ಪನೌ°ಟ” ಎಂದು ಕರೆದಿ ದ್ದಾರೆ. ಇನ್ನೂ ಪುರಾತತ್ವ ಇಲಾಖೆಗಳಿಗೆ ದೊರೆತಿರುವ ಶಾಸನ ಗಳಲ್ಲಿ ಮೈಸೂರು ಪ್ರಾಂತ್ಯವನ್ನು “ಮೈಷೂರು, ಮಹಿ ಷೂರು, ಮಹಿಷಪುರ, ಮಹಿಷೂರಪುರ, ಮೈಸೂನಾಡು ಎಂದು ಬಣ್ಣಿಸಲಾಗಿದೆ.

ಕರ್ನಾಟಕಕ್ಕೆ ಗಡಿಯನ್ನು ಹಂಚಿಕೊಂಡಿರುವ ತಮಿಳು ನಾಡಿನ ಪುರಾತನ ಸಾಹಿತ್ಯದಲ್ಲಿ ಮೈಸೂರು ಕುರಿತು ಉಲ್ಲೇಖವಿದ್ದು, “ಎರುಮೈನಾಡು ಎಂದು ಕರೆ ಯಲಾಗಿದೆ. 21ನೇ ಶತಮಾನದ ಬಳಿಕ ಮೈಸೂರು ಹೆಸರು ಬಹುತೇಕ ಚಾಲನೆಗೆ ಬಂದಿದ್ದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. 4ನೇ ಶತಮಾನದಿಂದ ಗಂಗರು ತಲಕಾಡು ಕೇಂದ್ರವನ್ನಾಗಿಸಿಕೊಂಡು ಅಳ್ವಿಕೆ ನಡೆಸಿದರೆ, ಗಂಗರನ್ನು ಸೋಲಿಸಿದ ಚೋಳರು ಮಹಿಷಾಪುರವನ್ನು ಚೋಳ ಮಂಡಲಕ್ಕೆ ಸೇರಿಸಿಕೊಂಡು ತಲಕಾಡನ್ನು ರಾಜರಾಪುರ ಎಂದು ಮರುನಾಮಕರಣ ಮಾಡಿ ಆಳ್ವಿಕೆ ನಡೆಸುತ್ತಾರೆ. ಚೋಳರ ಬಳಿಕ ವಿಜಯನಗರ ಅರಸರು ಮೈಸೂರು ಆಳ್ವಿಕೆ ನಡೆಸಿದರು. ಯದು ವಂಶ ಉದಯವಾದ ಬಳಿಕ 13ನೇ ಶತಮಾನದಿಂದ ಯದು ವಂಶದ ಅರಸರು ಮೈಸೂರಿನ ಅಳ್ವಿಕೆ ನಡೆಸುತ್ತ ಬಂದಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.