Advertisement

Mysore; ವೀಡಿಯೋ ಕಾಲ್ ನಿಂದ ಬಂದ ಸಾವು! ರೈಲಿಗೆ ಸಿಲುಕಿ ಬಿಹಾರ ಮೂಲದ ವ್ಯಕ್ತಿ ಬಲಿ

03:50 PM Mar 05, 2024 | Team Udayavani |

ಮೈಸೂರು: ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಪತಿಯು ರೈಲು ಬರುವುದನ್ನು ಗಮನಿಸದೆ ರೈಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ಬಿಹಾರ ಮೂಲದ 27 ವರ್ಷದ ಮನು ಕುಮಾರ್ ಸಾವನ್ನಪ್ಪಿದ ವ್ಯಕ್ತಿ. ಕೊಡ್ಡಕವಲಂದೆಯಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಮನುಕುಮಾರ್ ವಿಡಿಯೋ ಕಾಲ್ ವೇಳೆ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಳಿಗ್ಗೆ 7:40ರ ಸಮಯದಲ್ಲಿ ಪತ್ನಿಯೊಂದಿಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಮನು ಕುಮಾರ್ ಅವಘಡ‌ಕ್ಕೆ ಸಿಲುಕಿದ್ದಾರೆ.

ರೈಲು ಹಳಿ ಪಕ್ಕದಲ್ಲಿ ಮನು ಮಾತನಾಡುವಾಗ ಅವಘಡ ನಡೆದಿದ್ದು, ಚಾಮರಾಜನಗರ ಕಡೆಯಿಂದ ರೈಲು ಮೈಸೂರಿಗೆ ಬರುತ್ತಿತ್ತು.

ನಂಜನಗೂಡು ರೈಲ್ವೆ ಸಿಬ್ಬಂದಿ,‌ ಪೊಲೀಸರು ಭೇಟಿ ನೀಡಿದರು. ನಂಜನಗೂಡು ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಶವ ರವಾನೆ ಮಾಡಲಾಗಿದೆ.

Advertisement

ನಂಜನಗೂಡು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next