Advertisement

Mysore Bengaluru Expressway; ಹೂವಿನ ಗಿಡಗಳಿಗೆ ಬೆಂಕಿ: ವಾಹನ ಸಂಚಾರ ನಿಲ್ಲಿಸಿದ ಪೊಲೀಸರು

11:00 AM Feb 03, 2024 | Team Udayavani |

ರಾಮನಗರ: ಬೆಂಕಿ ಕಿಡಿಯಿಂದಾಗಿ ದಶಪಥ ರಸ್ತೆಯ ವಿಭಜಕದ ಹೂವಿನ ಗಿಡಗಳು ಹೊತ್ತಿ ಉರಿದ ಘಟನೆ ಮಾಯಗಾನಹಳ್ಳಿ ಸಮೀಪ ನಡೆದಿದೆ. ಸಿಗರೇಟ್ ಸೇದಿ ಬಿಸಾಕಿದ ಪರಿಣಾಮ ಕಿಡಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ನಲ್ಲಿ ಹೂವಿನ ಗಿಡಗಳನ್ನು ನೆಡಲಾಗಿತ್ತು. ಹೆದ್ದಾರಿಯಲ್ಲಿ ಹೊಗೆ ಆವರಿಸಿಕೊಂಡ ಪರಿಣಾಮ ಪೊಲೀಸರು ಮುಂಜಾಗೃತಾ ಕ್ರಮವಾಗಿ ವಾಹನಗಳನ್ನು ತಡೆದು ನಿಲ್ಲಿಸಿದರು. ಬಳಿಕ ನೀರು ಹಾಕಿ ಬೆಂಕಿ ನಂದಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಲಕ್ಷಾಂತರ ರೂ ವೆಚ್ಚದಲ್ಲಿ ಗಿಡಗಳನ್ನು ಬೆಳೆಸಿತ್ತು. ನೀರಿನ ವಾಹನ ಬರಲು ತಡವಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ವಾಹನ ತಡೆದು ಬಾಟಲ್ ನೀರು ಹಾಕಿ ಪೊಲೀಸರು ಬೆಂಕಿ ನಂದಿಸಲು ಯತ್ನಿಸಿದ ಪ್ರಸಂಗವೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next