Advertisement

Bhyrappa: ನನ್ನ ಕಾದಂಬರಿಗಳಿಗೆ ಹಣ ನೀಡದ ಹಿಂದಿ ಪ್ರಕಾಶಕರು- ಬೈರಪ್ಪ ಬೇಸರ

04:39 PM Aug 12, 2024 | Team Udayavani |

■ ಉದಯವಾಣಿ ಸಮಾಚಾರ
ಮೈಸೂರು: ನಾನು ಬರೆದ ಅನೇಕ ಕಾದಂಬರಿಗಳು ಹಿಂದಿ ಭಾಷೆಗೆ ತರ್ಜುಮೆ ಯಾಗಿವೆ. ಲಕ್ಷಾಂತರ ಪ್ರತಿಗಳೂ
ಮಾರಾಟವಾಗಿವೆ. ಆದರೆ, ಲೆಕ್ಕವನ್ನೇ ಕೊಡುತ್ತಿಲ್ಲ, ಹಣವನ್ನೂ ನೀಡುತ್ತಿಲ್ಲ. ಇವರೆಲ್ಲ ದೇಶ, ಹಿಂದು ಸಮಾಜದ ಉದ್ಧಾರ
ಮಾಡುವವರು ಎಂದು ಹಿರಿಯ ಕಾದಂಬರಿಕಾರ ಪ್ರೊ.ಎಸ್‌.ಎಲ್‌. ಬೈರಪ್ಪ ಬೇಸರ ವ್ಯಕ್ತಪಡಿಸಿದರು.

Advertisement

ಗೋಸ್ವಾಮಿ ತುಳಸಿದಾಸ ಜಯಂತಿ, ಗೋಸ್ವಾಮಿ ತುಳಸಿದಾಸ ಸಾರಸ್ವತ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನನ್ನ
ಕಾದಂಬರಿ ಮುದ್ರಿಸಿರುವ ಕನ್ನಡ ಪ್ರಕಾಶ ಕರು ಪ್ರಾಮಾಣಿಕರು. ನಿಯಮಿತವಾಗಿ ನನಗೆ ಹಣ ಕೊಡುತ್ತಾರೆ, ಜತೆಗೆ, ತೆರಿಗೆ
ಪಾವತಿಸುತ್ತಾರೆ.

ಆದರೆ, ಹಿಂದಿ ಪ್ರಕಾಶಕರಿಂದ ಹೀಗಾಗುತ್ತಿಲ್ಲ. ನನ್ನ 15 ಕೃತಿಗಳು ಹಿಂದಿ ಭಾಷೆಯಲ್ಲೇ 78 ಮರು ಮುದ್ರಣಗೊಂಡಿವೆ. ಮೊದಲು ಮುದ್ರ ಣಕ್ಕೆ 25 ಸಾವಿರ ರೂ. ಕೊಟ್ಟು ಸುಮ್ಮನಾಗುತ್ತಾರೆ. ಬಳಿಕ ಏನು ಕೊಡಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ದೇಶ-ವಿದೇಶಕ್ಕೆ ಹೋದಾಗ ಅಲ್ಲಿಯ ಓದುಗರು ನನ್ನ ಕೃತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ನಿಮಗೆ ಹೇಗೆ ದೊರೆಯಿತು ಎಂದರೆ ಹಿಂದಿ ಭಾಷೆಯಲ್ಲಿ ಎನ್ನುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next