Advertisement

ನನ್ನ ಹಣೆಬರಹ ಜನ ಬರೆಯುತ್ತಾರೆ:ಖರ್ಗೆ

06:30 AM Sep 13, 2018 | Team Udayavani |

ಬೆಂಗಳೂರು: ತಮ್ಮದು ಲೋಕಸಭೆಯಲ್ಲಿ ವಿದಾಯ ಭಾಷಣ ಎಂದು ಹೇಳಿದ್ದ ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹಣೆ ಬರಹವನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್‌ ಶಾ ರಿಂದ ಬರೆಯಲು ಸಾಧ್ಯವಿಲ್ಲ.

Advertisement

ನಾನು 40 ವರ್ಷದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನನ್ನ ಹಣೆ ಬರಹವನ್ನು ನನ್ನ ಕ್ಷೇತ್ರದ ಜನತೆ ನಿರ್ಧರಿಸುತ್ತಾರೆ. ಯಾರೂ ನನ್ನ ಹಣೆ ಬರಹ ಬರೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next