Advertisement

ಉತ್ತರ ಪ್ರದೇಶ:ಹಾಸ್ಟೆಲ್‌ನಲ್ಲಿ 70 ವಿದ್ಯಾರ್ಥಿನಿಯರ ಬೆತ್ತಲೆ ಪರೇಡ್‌

10:56 AM Mar 31, 2017 | Team Udayavani |

ಮುಜಾಫ‌ರ್‌ನಗರ : ಇಲ್ಲಿ ನಡೆದ ಅಘಾತಕಾರಿ ಘಟನೆಯೊಂದರಲ್ಲಿ  ವಿದ್ಯಾರ್ಥಿನಿಯರ  ವಸತಿ ಶಾಲೆಯೊಂದರಲ್ಲಿ  ಋತುಸ್ರಾವ ಪರೀಕ್ಷಿಸಲು ವಾರ್ಡನ್‌ 70 ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಬೆತ್ತಲೆ ಪರೇಡ್‌ ನಡೆಸಿ ದಾರ್ಷ್ಟ್ಯ ಮೆರೆದಿದ್ದಾಳೆ. 

Advertisement

ಕಸ್ತೂರ್ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಭಾನುವಾರ ಈ ಹೇಯ ಘಟನೆ ನಡೆದಿದೆ. ಬಾತ್‌ರೂಂ ಮತ್ತು ನೆಲದ ಮೇಲೆ ರಕ್ತದ ಕಲೆಗಳು ಕಂಡು ಬಂದ ಹಿನ್ನಲೆಯಲ್ಲಿ ವಾರ್ಡನ್‌ ಎಲ್ಲಾ ವಿದ್ಯಾರ್ಥಿನಿಯರನ್ನು  ಒಂದೆಡೆ ಸೇರಿಸಿ ಎಲ್ಲರೂ ಬಟ್ಟೆಗಳನ್ನು ಬಿಚ್ಚಿಡುವಂತೆ ಬೆದರಿಸಿ ಪರೀಕ್ಷೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.ಈ ಬಗ್ಗೆ ವಿದ್ಯಾರ್ಥಿನಿಯರು ಮತ್ತು ಪೋಷಕರು ವಾರ್ಡನ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದಾರೆ.

ಈಗಾಗಲೇ ವಾರ್ಡನ್‌ಳನ್ನು ಸಂಸ್ಪೆಂಡ್‌ ಮಾಡಲಾಗಿದ್ದು,ಆಕೆ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾಳೆ. ‘ಬಾತ್‌ರೂಂ ಮತ್ತು ನೆಲದ ಮೇಲೆ ರಕ್ತದ ಕಲೆಗಳಿದ್ದವು.ವಿದ್ಯಾರ್ಥಿನಿಯರ ಆರೋಗ್ಯದ ಕಾಳಜಿ ವಹಿಸಿ ಪರೀಕ್ಷೆ ನಡೆಸಿದೆ. ಸಣ್ಣ ಪ್ರಾಯದ ಬಾಲಕಿಯರು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ..ಹೀಗಾಗಿ ನಾನು ಏನಾದರು ಸಮಸ್ಯೆ ಇದೆಯಾ ಎಂದು ಕೇಳಿದೆ’ ಎಂದಿದ್ದಾಳೆ. 

‘ನಾನು ತುಂಬಾ ಶಿಸ್ತಿನ ವಾರ್ಡನ್‌ ಆಗಿದ್ದು, ಓದಿನ ವಿಚಾರದಲ್ಲಿ ಎಲ್ಲರನ್ನೂ ಹಿಡಿದಿಡುತ್ತಿದ್ದೆ. ಹೀಗಾಗಿ ವಿದ್ಯಾರ್ಥಿನಿಯರು ನನ್ನನ್ನು ದ್ವೇಷಿಸುತ್ತಾರೆ. ನನ್ನನ್ನು ಹೊರ ಹಾಕುವ ದುರುದ್ದೇಶದಿಂದ ಬೇರೆ ಸಿಬಂದಿಗಳು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟಿ  ಘಟನೆಯನ್ನು ದೊಡ್ಡದು ಮಾಡಿದ್ದಾರೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next