Advertisement

ಶಬೇಬರಾತ್ ಹಬ್ಬವನ್ನು ಮನೆಯಲ್ಲಿ ಆಚರಣೆಗೆ ಮುಸ್ಲಿಂ ಮುಖಂಡರ ಮನವಿ

07:50 PM Apr 08, 2020 | keerthan |

ಗಂಗಾವತಿ: ಶೇಬೆ-ಎ-ಬರಾತ್ ಹಬ್ಬವನ್ನು ಮನೆಯಲ್ಲಿ ಸರಳವಾಗಿ ಆಚರಣೆ ಮಾಡುವಂತೆ ಜಮೀಯಾ ಮಸೀಯಾ ಮಸೀದಿ ಅಂದ್ರೂನ್ ಕಮೀಟಿ ಅಧ್ಯಕ್ಷ ನೂರುದ್ದೀನ್ ನವಾಬಸಾಬ ಮನವಿ ಮಾಡಿದ್ದಾರೆ.

Advertisement

ಉದಯವಾಣಿ ಜೊತೆ ಮಾತನಾಡಿದ ಅವರು, ಕೋವಿಡ್-19 ವೈರಸ್ ಹರಡದಂತೆ ಸರಕಾರ ವಿಧಿಸಿರುವ ಕರ್ಪ್ಯೂ ಹಿನ್ನಲೆಯಲ್ಲಿ ಗುಂಪು ಸೇರಿ ನಮಾಜ್ ಪ್ರಾರ್ಥನೆ ಮಾಡಲು ಅವಕಾಶವಿರುವುದಿಲ್ಲ. ಕೋವಿಡ್-19 ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು ಯಾರು ಸಹ ಮನೆಯಿಂದ ಹೊರಗೆ ಹೋಗದೇ ಮನೆಯಲ್ಲಿರಬೇಕಿದೆ ಎಂದರು.

ಶಬೇ ಎ ಬರಾತ್ ಹಬ್ಬ ಬಡಿರಾತ್ ದಿನದಂದು ಇಡೀ ರಾತ್ರಿ ಜಾಗರಣೆ ಮಾಡಿ ಆಚರಣೆಗೆ ಮಾಡಬೇಕು. ಯಾರೂ ಸಹ ಮಸೀದಿಗೆ ಬರಬಾರದು. ಮಸೀದಿಯಲ್ಲಿ ಮೂರರಿಂದ ನಾಲ್ಕು ಜನ ಭೌತಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಲಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಕ್ತರ್ ಅನ್ಸಾರಿ, ಫಕೃದ್ದಿನ್ ಸಾಬ,ಸೈಯದಾಲಿ, ಶಾಮೀದ್ ಮನಿಯಾರ್,ಅನು ಜಿನ್ನಾ,ಶೇಖನಬಿ,ಅಯೂಬ್ ಖಾನ್ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next