Advertisement

ರಾಜ್ಯದಲ್ಲಿ ಮುಸ್ಲಿಂ ಸರ್ಕಾರವಿದೆ! ಕಾಂಗ್ರೆಸ್‌ನವರು ಸಂಘದ ಟ್ರೈನಿಂಗ್ ತಗೊಳ್ಳಿ: ಸೂಲಿಬೆಲೆ

03:04 PM Sep 23, 2024 | |

ಕಲಬುರಗಿ: ವಿನಾಃಕಾರಣ ತಪ್ಪು ತಿಳಿವಳಿಕೆಯಿಂದ ಆಪಾದನೆಗಳನ್ನು ಮಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಸಂಘ ಪರವಾರದಲ್ಲಿ (RSS) ತರಬೇತಿ ಪಡೆದುಕೊಳ್ಳಲಿ. ಆಗ ಆರ್‌ಎಸ್‌ಎಸ್ ಏನು ಹೇಳುತ್ತದೆ ಗೊತ್ತಾಗುತ್ತದೆ ಎಂದು ಪ್ರಚಾರಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದರು.

Advertisement

ನಗರದಲ್ಲಿ ಸೋಮವಾರ (ಸೆ.23) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಲಾದರೂ ಕಾಂಗ್ರೆಸ್ ನಾಯಕರಿಗೆ ಒಳ್ಳೆಯ ಸಂಸ್ಕೃತಿ ಬರುತ್ತದೆ. ನಾಲ್ಕು ದಿನ ಶಾಖೆಗೂ ಬರಲಿ, ಅಲ್ಲೂ ಒಳ್ಳೆಯ ಭಾಷೆ, ತಿಳಿವು ಬರುತ್ತದೆ. ದೂರ ನಿಂತು ಏನೇನೋ ತಿಳಿದುಕೊಂಡು ಮಾತನಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಒಂದು ವಾರ ಬರಲಿ ಎಂದು ಆಹ್ವಾನ ನೀಡಿದರು.

ಸತ್ವ: ಬಾಬಾ ಸಾಹೇಬ್ ಅಂಬೇಡ್ಕರ್, ಸರದಾರ ವಲ್ಲಭಭಾಯಿ ಪಟೇಲ್, ಮಹಾತ್ಮಾ ಗಾಂಧಿ ಅವರೆಲ್ಲ ಸಂಘ ಪರಿವಾರದ ಕೆಲಸವನ್ನು ಶ್ಲಾಘಿಸಿದ್ದಾರೆ. ಆದರೆ, ಇಂದಿನ ಕಾಂಗ್ರೆಸ್‌ನವರಿಗೆ ಸಂಘ ಪರಿವಾರ ಎಂದರೆ ಆಗಿ ಬರುತ್ತಿಲ್ಲ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ಮುಸ್ಲಿಂ ಸರಕಾರವಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಸರಕಾರ. ಅದನ್ನು ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಚಿವರೇ ಹೇಳಿಕೊಂಡು ಓಡಾಡಿದ್ದಾರಲ್ಲ ಎಂದು ಕಿಚಾಯಿಸಿದ ಅವರು, ಶಾಖೆಗಳಿಗೆ ಬೆಳಗ್ಗೆ ಬರುವುದರಿಂದ ನಿಮ್ಮ ಆಲೋಚನೆಗಳು ಬದಲಾಗುತ್ತವೆ. ಆಗೊಂದು ಹಿಂದೂ ರಾಷ್ಟ್ರದ ಕಲ್ಪನೆ ನಿಮ್ಮಲ್ಲೂ ಮೊಳಕೆ ಒಡೆಯಲಿ ಎಂದರು.

ನಿಮ್ಮಆರೋಪದಂತೆ ರಾಜಭವನ ಪೊಲೀಸ್ ಠಾಣೆಯಾದಂತೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನೀವು ಮಾತ್ರ ರಾಜ್ಯವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡಿದ್ದೀರಿ ಎಂದು ಆರೋಪ ಮಾಡಿದರು.

Advertisement

ನೀವು ಮುಸ್ಲಿಂರ ಸೆರಗಿನಲ್ಲಿ ಕುಳಿತುಕೊಂಡು ಮಾತನಾಡಿದರೆ ಹೇಗೆ? ಅವರ ಬೆಂಬಲದಿಂದ ಅಲ್ಲವೇ ರಾಜ್ಯದಲ್ಲಿ ಹಲವು ಘಟನೆಗಳು ನಡೆಯುತ್ತಿರುವುದು. ಅವರು ವಿರುದ್ದ ಕಠಿಣ ಕ್ರಮ ಕೈಗೊಳ್ಳದೆ ಇರುವುದಕ್ಕೆ ಅಲ್ವಾ? ಡಿಜೆ ಹಳ್ಳಿ, ಕೆಜಿ ಹಳ್ಳಿ ಹಾಗೂ ನೆಲಮಂಗಲ, ಗಣೇಶನಿಗೆ ಕಲ್ಲು ಕೊನೆಗೆ ಸರಕಾರ ಗಣೇಶನನ್ನು ವ್ಯಾನಿನಲ್ಲಿ ಕೊಂಡೊಯ್ಯಲಿಲ್ಲವೇ ಎಂದು ಪ್ರಶ್ನಿಸಿದರು.

ಬಾಗಲಕೋಟೆಯಲ್ಲಿ ತ್ರಿ ಒನ್ ತ್ರಿ (313) ಎನ್ನುವ ಬ್ಯಾನರ್ ದೊಡ್ಡದಾಗಿ ಕಾಣುತ್ತೆ. ಇದು ಅಲ್ ಬದರ್ ಯುದ್ಧದ ಘಟನೆ. ಆ ಯುದ್ದಲ್ಲಿ ಪೈಗಂಬರ್ ಜತೆ 313 ಜನ ಇದ್ದರು. ಆ ಯುದ್ದ ಹೇಗೆ ಗೆದ್ದರೋ ಹಾಗೆ ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುವಂತಹದ್ದು, ಅದನ್ನು ತೆಗೆಯಿಸಲು ಸರಕಾರಕ್ಕೆ ಆಗಿಲ್ಲ. ಇದು ನಿರ್ವೀರ್ಯ ಸರಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next