Advertisement

Maski: ಹಾಡಹಗಲೇ ಕಳ್ಳರ ಕೈಚಳಕ; ಚಿನ್ನ , ನಗದು ಕಳ್ಳತನ

05:03 PM Jun 26, 2024 | Team Udayavani |

ಮಸ್ಕಿ: ಪಟ್ಟಣದ ಸೋಮನಾಥ ನಗರದಲ್ಲಿ ಹಾಡಹಗಲೇ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಪತ್ರಕರ್ತ ಹನುಮೇಶ ನಾಯಕ ಎಂಬುವರಿಗೆ ಸೇರಿದ ಮನೆಯಾಗಿದ್ದು, ಮನೆಯ ಬಾಗಿಲು ಮುರಿದ ಕಳ್ಳರು 1 ತೊಲೆ ಚಿನ್ನ, 20 ತೊಲೆ ಬೆಳ್ಳಿ, 30 ಸಾವಿರ ನಗದು ಹಣ, ತಾಳಿ ಇತರೆ ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಮನೆಯ ಬೀಗ ಹಾಕಿ ಕುಟುಂಬದವರು ಕೆಲಸ ನಿಮಿತ್ತ ಬೇರ ಕಡೆ ತೆರಳಿದ್ದಾಗ ಈ ಘಟನೆ ನಡೆದಿದೆ.

ಘಟನೆ ಸ್ಥಳಕ್ಕೆ ಸರ್ಕಲ್ ಇನ್ ಸ್ಪೆಕ್ಟರ್ ಬಾಲಚಂದ್ರ ಡಿ. ಲಕ್ಕಂ, ಸಬ್ ಇನ್ ಸ್ಪೆಕ್ಟರ್ ತಾರಾಭಾಯಿ, ಸಬ್ ಇನ್ ಸ್ಪೆಕ್ಟರ್ (ಕ್ರೈಂ) ಭೀಮದಾಸ್ ಭೇಟಿ ನೀಡಿ ಪರಿಶೀಲಿಸಿದರು.

ರಾಯಚೂರಿಂದ ಶ್ವಾನ ದಳ ಹಾಗೂ ಬೆಳಚ್ಚು ತಜ್ಞರನ್ನು ಕರೆಯಿಸಿ ಕಳ್ಳರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Advertisement

ಸ್ಥಳೀಯ ಠಾಣೆಯಲ್ಲಿ ಹನುಮೇಶ ನಾಯಕ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next