Advertisement

ನಾನು ಮಂತ್ರಿ ಆಗಿಲ್ಲ ಅಂದ್ರು ಮಂತ್ರಿಗಿಂತ ಚೆನ್ನಾಗಿ ಇದ್ದೇನೆ : ಮುರುಗೇಶ್ ನಿರಾಣಿ

05:31 PM Jul 29, 2020 | sudhir |

ಮೈಸೂರು: ಸವದಿ ದೆಹಲಿಗೆ ಹೋಗಿದ್ದೆ ನನಗೆ ಗೊತ್ತಿಲ್ಲ. ನಾನು ಬೆಳಗಿನಿಂದ ರಾತ್ರಿವರೆಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದೆ. ರಾಜ್ಯರಾಜಕಾರಣದಲ್ಲಿ ಏನಾಗ್ತಿದೆ ಎಂಬುದು ನನಗೆ ಗೊತ್ತಿಲ್ಲ.ಇಂದು ಬೆಂಗಳೂರಿಗೆ ಹೋಗಿ ಮಾಹಿತಿ ಪಡೆಯುತ್ತೇನೆ. ಆದರೆ ಮೂರು ವರ್ಷವೂ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರ್ತಾರೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.

Advertisement

ಮೈಸೂರಿನಲ್ಲಿ ಸುತ್ತೂರು ಶಾಖಾ ಮಠ ಭೇಟಿ ಬಳಿಕ ಮಾದ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು ನಾನು ರಾಜಕಾರಣದಲ್ಲಿ ಬಹಳ ಚಿಕ್ಕವ. ಕಾರ್ಖಾನೆ ಬಗ್ಗೆ ಕೇಳಿದರೆ ಮಾತ್ರ ನಾನು ಹೇಳ್ತಿನಿ. ರಾಜಕಾರಣದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ನಾನು ಮಂತ್ರಿ ಆಗಿಲ್ಲ ಅಂದ್ರು ಮಂತ್ರಿಗಿಂತ ಚೆನ್ನಾಗಿದ್ದೇನೆ. 5ಸಾವಿರ ಕೋಟಿ ಟರ್ನ್ ಓವರ್ ಇದೆ‌. ಮುಂದಿನ ಬಾರಿಯ ಚುನಾವಣೆಗೆ ಟಿಕೆಟ್ ಕೊಡದಿದ್ದರೂ ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದರು.

ಮೈ ಶುಗರ್ ಕಾರ್ಖಾನೆ ಮೇಲೆ ನಿರಾಣಿ ಕಣ್ಣಿದೆ ಎಂಬ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನೊಬ್ಬ ಕೈಗಾರಿಕೋದ್ಯಮಿ. ಟೆಂಡರ್‌ನ ಬಿಡ್ ವೇಳೆ ನನ್ನ ಬಳಿ ಅಷ್ಟು ಹಣ ಇದ್ದರೆ ನಾನು ಬಿಡ್‌ನಲ್ಲಿ ಭಾಗಿಯಾಗುತ್ತೇನೆ. ಗ್ಲೋಬಲ್‌ನಲ್ಲಿ ಬಿಡ್‌ಗೆ ಕೆಲವೊಂದು ನಿಯಮ ಇರುತ್ತೆ. ಇದರಲ್ಲಿ ಯಾರು ಬೇಕಾದರೂ ಹೋಗಿ‌ ಭಾಗಿಯಾಗಬಹುದು.ಇದರಲ್ಲಿ ಯಾರ ಹಸ್ತಕ್ಷೇಪವು ನಡೆಯಲ್ಲ. ಫೈನಾನ್ಶಿಯಲ್ ನಾನು ಚೆನ್ನಾಗಿದ್ದರೆ ಬಿಡ್ ಮಾಡುತ್ತೇನೆ ಇಲ್ಲವಾದರೆ ಇಲ್ಲ. ನಮ್ಮ ಪಕ್ಷದಲ್ಲಿ ಯಾರೂ ಇದಕ್ಕೆ ವಿರೋಧ ಮಾಡ್ತಿಲ್ಲ.

ನಿರಾಣಿ ಒಬ್ಬರು ಕೈಗಾರಿಕೋದ್ಯಮಿಯಾಗಿದ್ದಾರೆ. ಇದು ನಮ್ಮ 224 ಶಾಸಕರಿಗೂ ಗೊತ್ತಿದೆ. ಸ್ಥಳೀಯ ರೈತರು, ಜನರೆಲ್ಲರು ಈಗಾಗಲೇ ಕಾರ್ಖಾನೆ ನೋಡಿದ್ದಾರೆ. ಕಾರ್ಖಾನೆ ಪ್ರಾರಂಭಕ್ಕೆ ಜೆಡಿಎಸ್, ಕಾಂಗ್ರೆಸ್ ನಾಯಕರು ಸಹಕಾರ ನೀಡಿದ್ದಾರೆ. ಮಾಜಿ ಸಚಿವ ಪುಟ್ಟರಾಜು ನನ್ನನ್ನು ತಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಕಾರ್ಖಾನೆ ಉದ್ಘಾಟನೆಗೆ ಯಾವುದೇ ಸಮಸ್ಯೆಯೂ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next