Advertisement

ವಕೀಲರನ್ನು ಭೇಟಿ ವೇಳೆ ಮುರುಘಾ ಶರಣರನ್ನು ವಾಪಾಸ್‌ ಮಠಕ್ಕೆ ಕಳುಹಿಸಿದ ಪೊಲೀಸರು

12:44 PM Aug 29, 2022 | Team Udayavani |

ಚಿತ್ರದುರ್ಗ: ಪೋಕ್ಸೋ ಕಾಯ್ದೆ ಸುಳಿಗೆ ಸಿಲುಕಿರುವ ಶ್ರೀ ಶಿವಮೂರ್ತಿ ಮುರುಘಾ  ಶರಣರು ಹಾವೇರಿಯಿಂದ ಮಠಕ್ಕೆ ಮರಳುತ್ತಿದ್ದಾರೆ.

Advertisement

ಮುರುಘಾ ಶ್ರೀಗಳು ಸೋಮವಾರ ಮಠದಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಇದನ್ನು ತಿಳಿದ ಪೊಲೀಸರು ಹಾವೇರಿ ಜಿಲ್ಲೆ ಬಂಕಾಪುರ ಹೆದ್ದಾರಿ ಬಳಿ ಪೊಲೀಸರು ಮಠಕ್ಕೆ ಮರಳುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ಮಠಕ್ಕೆ ಪೊಲೀಸರ ಭೇಟಿ ನೀಡಿದ್ದರು. ಮಠದಲ್ಲಿ ಶ್ರೀಗಳಿಲ್ಲ ಎನ್ನುವ ಸುದ್ದಿಯ ಬೆನ್ನಲ್ಲೇ ಮಠಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಧಾವಿಸಿದ್ದರು.

ಶ್ರೀಗಳಿಗೆ ನಿಯಮಾನುಸಾರ ನೋಟೀಸ್ ಜಾರಿ ಮಾಡುವ ಹಿನ್ನೆಲೆಯಲ್ಲಿ ಪೊಲೀಸರು ಭೇಟಿ ನೀಡಿದ್ದರು.

ಮಠದ ಸಲಹಾ ಸಮಿತಿ ಸದಸ್ಯ ಆನಂದಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಶ್ರೀಗಳು ಹಾವೇರಿಯಲ್ಲಿ ವಕೀಲರನ್ನು ಭೇಟಿ ಮಾಡಲು ತೆರಳಿದ್ದರು. ಮಧ್ಯಾಹ್ನದ ಹೊತ್ತಿಗೆ ಮಠಕ್ಕೆ ವಾಪಾಸಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next