Advertisement

15 ವರ್ಷಗಳಿಂದ ನನ್ನ ವಿರುದ್ದ ಪಿತೂರಿ ನಡೆಯುತ್ತಿದೆ,ತನಿಖೆಗೆ ಸಂಪೂರ್ಣ ಸಹಕಾರ; ಮುರುಘಾ ಶ್ರೀ

01:35 PM Aug 29, 2022 | Team Udayavani |

ಚಿತ್ರದುರ್ಗ: ವಕೀಲರನ್ನು ಭೇಟಿಯಾಗಿ ಮುರುಘಾ ಮಠಕ್ಕೆ ಬಂದ ಶ್ರೀ ಶಿವಮೂರ್ತಿ ಶರಣರು ಸುದ್ದಿಗೋಷ್ಟಿಯಲ್ಲಿ ಮಾತಾನಾಡಿದರು.

Advertisement

ಮಠದಲ್ಲಿ ಮಾತಾನಾಡಿದ ಅವರು, ಯಾವುದೇ ಕಾರಣಕ್ಕೂ ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ. ಎದುರಾಗಿರುವ ಸಮಸ್ಯೆಯನ್ನು ಶಾಂತವಾಗಿ ಬಗೆಹರಿಸೋಣ. ಎಲ್ಲರೂ ಒಟ್ಟಾಗಿ ಹೋರಾಡೋಣ. ಇದೇನು ಹೊಸತಲ್ಲ ಕಳೆದ 15 ವರ್ಷಗಳಿಂದ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದರು.

ಏನೋ ಅಹಿತಕರ ಸಂದರ್ಭ ಎದರುರಾಗಿದೆ.  ಮಠದೊಳಗೆ ಒಳಗೆ ನಡೆಯುತ್ತಿದ್ದ, ಪಿತೂರಿ ಈಗ ಹೊರಗೆ ನಡೆಯುತ್ತಿದೆ. ಸಮಸ್ಯೆಗೆ ತಾರ್ಕಿಕ ಅಂತ್ಯವಾಡುವ ನಿಟ್ಟಿನಲ್ಲಿ ಕೆಲಸ ಮಾಡುವ. ನಿಮ್ಮೆಲ್ಲರ ಬೆಂಬಲದಿಂದ ನಾವು ಧೈರ್ಯವಾಗಿದ್ದೇವೆ ಎಂದು ಭಕ್ತಾದಿಗಳ ಮುಂದೆ ಶ್ರೀಗಳು ಹೇಳಿದರು.

ನಾವು ನೆಲದ ಕಾನೂನನ್ನು ಗೌರವಿಸುತ್ತೇವೆ. ನಾವು ಕೂಡ ನ್ಯಾಯಯುತ ಸ್ಥಾನದಲ್ಲಿದ್ದೇವೆ. ತನಿಖೆಗೆ ಎಲ್ಲ ಬಗೆಯಲ್ಲಿ ಸಹಕಾರ ನೀಡುತ್ತೇವೆ. ಮಠದ ಭಕ್ತರು ಹಾಗೂ ಅಭಿಮಾನಿಗಳು ಯಾವುದೇ ಕಾರಣಕ್ಕೂ ಗಾಳಿ ಸುದ್ದಿ, ವದಂತಿಗಳಿಗೆ ಕಿವಿಗೊಡಬಾರದು, ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಮನವಿ ಮಾಡಿದರು.ಇದರಲ್ಲಿ ಯಾವುದೇ ಕಾರಣಕ್ಕೂ ಪಲಾಯನವಾದ ಇಲ್ಲ. ನಾವು ಈ ಸಂಕಷ್ಟದಿಂದ ಮುಕ್ತರಾಗಿ ಬಂದೇ ಬರುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next