Advertisement

Murdeshwar; ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ರಕ್ಷಿಸಿದ ಲೈಫ್ ಗಾರ್ಡಗಳು

09:42 PM Oct 25, 2023 | Team Udayavani |

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಆಟವಾಡುತ್ತಿದ್ದ ಪ್ರವಾಸಿಗನೋರ್ವ ಅಬ್ಬರದ ಅಲೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವಾಗ ಸ್ಥಳದಲ್ಲಿಯೇ ಇದ್ದ ಲೈಫ್ ಗಾರ್ಡಗಳು ತತ್ ಕ್ಷಣ ಧಾವಿಸಿ ಆತನನ್ನು ರಕ್ಷಣೆ ಮಾಡಿದ ಘಟನೆ ಬುಧವಾರ ಸಂಭವಿಸಿದೆ.

Advertisement

ಕಡಲಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಪ್ರವಾಸಿಗನನ್ನು ಹಾಸನ ಜಿಲ್ಲೆ ಹನುಮಂತಪುರದ ನಿವಾಸಿ ಮನೋಜ (24) ಎಂದು ಗುರುತಿಸಲಾಗಿದೆ. ಹಾಸನದಿಂದ 7 ಜನ ಯುವಕರು ಪ್ರವಾಸಕ್ಕೆ ಬಂದಿದ್ದು ಬುಧವಾರವಷ್ಟೇ ಮುರ್ಡೇಶ್ವರ ತಲುಪಿದ್ದರು. ಇವರೆಲ್ಲರೂ ನೀರಿನಲ್ಲಿ ಆಟವಾಡುತ್ತಾ ಇರುವಾಗ ಮನೋಜ ಅಲೆಯ ಹೊಡೆತಕ್ಕೆ ಸಿಲುಕಿ ಇನ್ನೇನು ಮುಳುಗುತ್ತಿದ್ದಾನೆ ಎನ್ನುವಾಗ ಲೈಫ್ ಗಾರ್ಡ ಆತನನ್ನು ರಕ್ಷಣೆ ಮಾಡಿದ್ದಾರೆ.

ಸಾಕಷ್ಟು ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿದ್ದು ಸ್ಥಳೀಯ ಆರ್.ಎನ್.ಎಸ್. ಆಸ್ಪತ್ರೆಯಲ್ಲಿನ ಐ.ಸಿ.ಯು. ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲೈಪಗಾರ್ಡ್ ಸಿಬಂದಿ ಚಂದ್ರಶೇಖರ ದೇವಾಡಿಗ, ಜಯರಾಮ ಹರಿಕಾಂತ ಹಾಗೂ ಹನುಮಂತ ಇವರುಗಳೇ ಆತನನ್ನು ರಕ್ಷಣೆ ಮಾಡಿದವರಾದವರಾಗಿದ್ದಾರೆ. ಕಳೆದ ಒಂದು ವಾರದಲ್ಲಿ ಮುರ್ಡೇಶ್ವರ ಕಡಲಲ್ಲಿ ಆರು ಜನರ ರಕ್ಷಣೆ ಮಾಡಿದಂತಾಗಿದ್ದು ಇಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಸಾಲು ಸಾಲು ರಜೆಯಲ್ಲಿ ಮೋಜು ಮಸ್ತಿ ಮಾಡುವುದೇ ಈ ರೀತಿಯ ಅನಾಹುತಕ್ಕೆ ಕಾರಣವಾಗಿದ್ದು ಸ್ಥಳೀಯರ, ಲೈಫ್ ಗಾರ್ಡಗಳ ಮಾತಿಗೆ ಇಲ್ಲಿ ಬೆಲೆಯೇ ಇಲ್ಲವಾಗಿದೆ ಎನ್ನುವುದು ವಾಸ್ತವ.

Advertisement

Udayavani is now on Telegram. Click here to join our channel and stay updated with the latest news.

Next