Advertisement

ಬಾಗಲಕೋಟೆಯಲ್ಲಿ ಸ್ವಾಮೀಜಿ ಪುತ್ರನ ಬರ್ಬರ ಹತ್ಯೆ 

01:56 PM Sep 30, 2017 | Team Udayavani |

ಬಾಗಲಕೋಟೆ: ಆಸ್ತಿ ವಿವಾದಕ್ಕೆ ಸಂಬಂಧಿಸಿ ಸ್ವಾಮೀಜಿಯೊಬ್ಬರ ಮಗನನ್ನುದುಷ್ಕರ್ಮಿಗಳು ಬರ್ಬರವಾಗಿ ಇರಿದು ಕೊಂದ ಘಟನೆ ಶನಿವಾರ ಜಮಖಂಡಿಯ ನಾವಲಗಿಯಲ್ಲಿ ನಡೆದಿದೆ . 

Advertisement

ಚಿಕ್ಕಯ್ಯ ಮಠದ (೩೨)ಎಂಬ ವ್ಯಕ್ತಿ ಹತ್ಯೆಗೀಡಾಗಿದ್ದು , ಈತ ಜಮಖಂಡಿಯ ಬಸವಗೋಪಾಲ ನೀಲಮಾಣಿಕ್ಯ ಮಠದ  ದಾನೇಶ್ವರ ಸ್ವಾಮೀಜಿಯ ಮೊದಲ  ಹೆಂಡತಿಯ ಪುತ್ರ ಎಂದು ತಿಳಿದುಬಂದಿದೆ. 

ಮಠದ ಆಸ್ತಿ ವಿಚಾರಕ್ಕೆ ಸಂಬಂಧಿಸಿ ಸ್ವಾಮೀಜಿ ಮತ್ತು ಮಗನ ನಡುವೆ ಕಲಹವಿತ್ತು ಎಂದು ತಿಳಿದುಬಂದ್ದಿದ್ದು,2 ವರ್ಷದ  ಹಿಂದೆ ಗೋಕಾಕ್ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ  ಕೊಲೆ ಯತ್ನ ನಡೆದಿತ್ತು ಎನ್ನಲಾಗಿದೆ. 

ಬನಹಟ್ಟಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next