Advertisement

Mundgod; ಸರಕಾರಿ ಬಸ್- ಬೈಕ್ ಅಪಘಾತ: ಸವಾರರಿಬ್ಬರು ಮೃತ್ಯು

06:26 PM Feb 25, 2024 | Team Udayavani |

ಮುಂಡಗೋಡ: ತಾಲೂಕಿನ ಪಾಳಾ ಸನಿಹ ಸಿಂಗನಳ್ಳಿ ಬಳಿ ರವಿವಾರ ಕೆಎಸ್‌ಆರ್‌ಟಿಸಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

Advertisement

ಮೃತರಿಬ್ಬರು ಬೈಕ್ ಸವಾರರಾಗಿದ್ದು, ಹಾನಗಲ್ ತಾಲೂಕಿನ ಆರೊಗೊಪ್ಪ ಗ್ರಾಮದ ಮಹಾಬಲೇಶ್ವರ ಸಂಕಪಾಳೆ(38) ಹಾನಗಲನ್ ಹುಡೆ ಗ್ರಾಮದ ಜಾಫರ್ ದೇವಸೂರ (32) ಎಂದು ತಿಳಿದು ಬಂದಿದೆ.

ಬೈಕ ಸವಾರರು ಹಾನಗಲ್‌ದಿಂದ ಕಾತೂರ ಮಾರ್ಗವಾಗಿ ಮುಂಡಗೋಡಗೆ ಬರುತ್ತಿದ್ದರು ಮುಂಡಗೋಡದಿಂದ ಹಾಲಗಲ್ ಕಡೆ ಹೋಗುತ್ತಿದ್ದ ಬಸ್ ಈ ಪರಿಣಾಮ ಮಹಾಬಲೇಶ್ವರ ಸ್ಥಳದಲ್ಲಿಯೇ ಮೃತಪಟ್ಟರೆ, ಜಾಫರ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next