Advertisement

Mundaje: ದಿನಸಿ ಅಂಗಡಿಯಿಂದ ನಗದು ಕಳವು

12:46 AM Aug 11, 2023 | Team Udayavani |

ಬೆಳ್ತಂಗಡಿ: ಗುರುವಾರ ಮುಂಜಾನೆ ಮುಂಡಾಜೆಯ ಸೋಮಂತಡ್ಕದ ದಿನಸಿ ಅಂಗಡಿಯಿಂದ ನಗದು ಕಳವಾಗಿದೆ.

Advertisement

ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ, ಪರಿಸರದಲ್ಲಿ ಮನೆಗಳು ಇರುವ ಪ್ರದೇಶದಲ್ಲಿರುವ ಪದ್ಮಾಂಬಾ ಟ್ರೇಡರ್ಸ್‌ಗೆ ನುಗ್ಗಿದ ಕಳ್ಳ ಅಂಗಡಿಯ ಮೇಜಿನ ಒಳಗೆ ವ್ಯಾಪಾರ ಉದ್ದೇಶಕ್ಕೆ ಇಟ್ಟಿದ 50,000 ರೂ. ನಗದನ್ನು, ಬೀಗ ಮುರಿದು ಎಗರಿಸಿ ಪರಾರಿಯಾಗಿದ್ದಾನೆ.

ಮುಂಜಾನೆ 3.40ರ ಸುಮಾರಿಗೆ ಕಳ್ಳ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಅಂಗಡಿಗಿಂತ ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿ ಮುಖಕ್ಕೆ ಮಾಸ್ಕ್ ಹಾಕಿ ರಾಡ್‌ ಮತ್ತು ಪ್ಲಾಸ್ಟಿಕ್‌ ಬ್ಯಾಗ್‌ ಕೈಯಲ್ಲಿ ಹಿಡಿದುಕೊಂಡು ಅಂಗಡಿ ಕಡೆ ಹೋಗುವ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಅಂಗಡಿ ಮಾಲಕ ಪದ್ಮೇಶ್‌ ದೂರು ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿಯ ಕೆಲವೆಡೆ ಕಳವು ಯತ್ನ ನಡೆದಿದ್ದು, ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಸಾಲಿಗ್ರಾಮ ಅಡಿಕೆ ಅಂಗಡಿಗೆ ನುಗ್ಗಿದ್ದ ಕಳ್ಳರು ಕೈಚಳಕ ತೋರಿದ್ದರು. ಇದು ಸಿಸಿ ಕೆಮರಾದಲ್ಲಿ ಸೆರೆಯಾಗಿತ್ತು. ಮುಂಜಾನೆ ಕಳ್ಳತನ ನಡೆಸುವ ಜಾಲ ಸಕ್ರಿಯವಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next