Advertisement

ಉಡುಪಿ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ಪ್ರಕರಣ: ನಗರಸಭೆಯಿಂದ ಯಾತ್ರಿ ನಿವಾಸಕ್ಕೆ ನೋಟಿಸ್‌

08:12 PM Jan 29, 2022 | Team Udayavani |

ಉಡುಪಿ : ನಗರದ ಸರ್ವಿಸ್‌ ಬಸ್‌ ನಿಲ್ದಾಣದ ಬಳಿಯ ಯಾತ್ರಿ ನಿವಾಸದಲ್ಲಿ ನಗರಸಭೆ ನೀಡಿದ ಪರವಾನಿಗೆ ಉಲ್ಲಂಘಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ರಮೇಶ್‌ ಶೆಟ್ಟಿಗೆ ನಗರಸಭೆ ನೋಟಿಸ್‌ ಜಾರಿ ಮಾಡಿದೆ.

Advertisement

ಈ ಲಾಡ್ಜ್ ಅನ್ನು ನಗರಸಭೆಯಿಂದ ರಮೇಶ್‌ ಶೆಟ್ಟಿ 20 ವರ್ಷಗಳಿಗಾಗಿ ಲೀಸಿಗೆ ಪಡೆದುಕೊಂಡಿದ್ದರು. ಈಗ 12 ವರ್ಷ ಪೂರೈಸಲಾಗಿದೆ. ಸರಕಾರ ಹಾಗೂ ನಗರಸಭೆಗೆ ಸಂಬಂಧಿಸಿದ ಈ ಕಟ್ಟಡದಲ್ಲಿ ನಿರಂತರವಾಗಿ ಅನೈತಿಕ ವ್ಯವಹಾರ ನಡೆಸಿ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದರು. ಈ ಬಗ್ಗೆ ಹಲವಾರು ಬಾರಿಗೆ ಎಚ್ಚರಿಕೆ ನೀಡಿದ್ದರೂ ಅನೈತಿಕ ವ್ಯವಹಾರ ಮುಂದುವರಿದಿದ್ದು, ಆದ್ದರಿಂದ ಪರವಾನಿಗೆ ರದ್ದುಪಡಿಸುವಂತೆ ಪೊಲೀಸ್‌ ಇಲಾಖೆಯು ನಗರಸಭೆಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ನೋಟಿಸ್‌ ಜಾರಿ ಮಾಡಿದೆ.

ಹಿಂದೆಯೂ ಪ್ರಕರಣ ದಾಖಲು
ಇದೇ ಲಾಡ್ಜ್ ನಲ್ಲಿ ಬಾಲಕಿ ಹಾಗೂ ಮತ್ತೂರ್ವ ಆರೋಪಿಗೆ ರೂಮ್‌ ನೀಡಿದ್ದ ಎನ್ನುವ ಕಾರಣಕ್ಕೆ ರಮೇಶ್‌ ಶೆಟ್ಟಿ ಮೇಲೆ ಕೋಟ ಪೊಲೀಸ್‌ ಠಾಣೆಯಲ್ಲಿ ಈ ಹಿಂದೆ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಇದೇ ರೀತಿ ಬಿಟ್ಟರೆ ಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ನೋಟಿಸ್‌ ಜಾರಿ ಮಾಡಲಾಗಿದ್ದು, 10ರಿಂದ 15 ದಿನಗಳೊಳಗೆ ಪರವಾನಿಗೆ ರದ್ದುಗೊಳಿಸಲಾಗುತ್ತದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ. ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಇಬ್ಬರು ಮಹಿಳೆಯರನ್ನು ಸಖೀ ಕೇಂದ್ರಕ್ಕೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next