Advertisement

“ಜೂನಿಯರ್‌ ಸ್ಟೇನ್‌’ಖ್ಯಾತಿಯ ಕರಣ್‌ ತಿವಾರಿ ಆತ್ಮಹತ್ಯೆ

09:20 PM Aug 12, 2020 | mahesh |

ಮುಂಬಯಿ: ಮುಂಬಯಿಯ ಕ್ಲಬ್‌ ಕ್ರಿಕೆಟಿಗ, “ಜೂನಿಯರ್‌ ಸ್ಟೇನ್‌’ ಖ್ಯಾತಿಯ ಕರಣ್‌ ತಿವಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಮಲಾಡ್‌ ನಿವಾಸದಲ್ಲಿ ಅವರು ನೇಣು ಬಿಗಿದು ಈ ಕೃತ್ಯವೆಸಗಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅವಕಾಶ ಲಭಿಸದಿದ್ದುದರಿಂದ ಕರಣ್‌ ಖನ್ನತೆಗೆ ಒಳಗಾಗಿದ್ದರು ಎಂದು ಅವರ ಆತ್ಮೀಯ ಮಿತ್ರರೊಬ್ಬರು ಹೇಳಿದ್ದಾರೆ.

Advertisement

ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ ಶೈಲಿಯಲ್ಲೇ ಬೌಲಿಂಗ್‌ ನಡೆಸುತ್ತಿದ್ದ ಕರಣ್‌ ತಿವಾರಿ, ಆತ್ಮಹತ್ಯೆಯ ನಿರ್ಧಾರಕ್ಕೂ ಮೊದಲು ಉದಯಪುರದಲ್ಲಿದ್ದ ತನ್ನ ಆತ್ಮೀಯ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಅವರು ಮುಂಬಯಿಯಲ್ಲೇ ಇದ್ದ ಕರಣ್‌ ಸೋದರಿಗೆ ವಿಷಯ ಮುಟ್ಟಿಸಿದರು. ಅವರು ತಾಯಿಗೆ ಸುದ್ದಿ ರವಾನಿಸಿದರು. ಆದರೆ ಆಗಲೇ ವಿಳಂಬವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಕರಣ್‌ ಮೃತಪಟ್ಟರು.

ಬಿಸಿಸಿಐ ನಿಯಮದ ಪ್ರಕಾರ ಯಾವುದೇ ವಯೋಮಿತಿಯ ಕ್ರಿಕೆಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದರಷ್ಟೇ ಅವರು ಐಪಿಎಲ್‌ ಹರಾಜು ವ್ಯಾಪ್ತಿಗೆ ಬರುತ್ತಾರೆ. ಆದರೆ ಕರಣ್‌ ತಿವಾರಿ ಯಾವುದೇ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಮುಂಬಯಿ ಇಂಡಿಯನ್ಸ್‌ ಅಭ್ಯಾಸದ ವೇಳೆ ಅವರು ನೆಟ್‌ ಬೌಲರ್‌ ಆಗಿ ಕಾಣಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next