Advertisement

ಚಾಮರಾಜನಗರದಲ್ಲಿ ಮುಂಬೈ ಯುವಕನಿಗೆ ಕೋವಿಡ್‌ 19 ಸೋಂಕು

05:31 AM Jun 10, 2020 | Team Udayavani |

ಚಾಮರಾಜನಗರ: ಮುಂಬೈ ನಿವಾಸಿ, ವೈದ್ಯಕೀಯ ವಿದ್ಯಾರ್ಥಿ ಜಿಲ್ಲೆಗೆ ಬಂದಿದ್ದು ಆತನಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಆತ ಮುಂಬೈ ವಾಸಿಯಾದ್ದ ರಿಂದ ಜಿಲ್ಲೆಯವನು ಎಂದು ಪರಿಗಣಿಸ ಲಾಗುವುದಿಲ್ಲ. ರಾಜ್ಯದಲ್ಲಿರುವ ಜಿಲ್ಲಾ ವಾರು ಕೋವಿಡ್‌ ಪ್ರಕರಣಗಳ ಪಟ್ಟಿ ಯಲ್ಲಿ ಇದು ಇತರೆ ವರ್ಗಕ್ಕೆ ಸೇರುತ್ತದೆ. ಹೀಗಾಗಿ ಚಾಮರಾಜನಗರ ಜಿಲ್ಲೆ ಈಗಲೂ ಹಸಿರು ವಲಯವಾಗಿಯೇ ಉಳಿದಿದೆ.

Advertisement

ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾಧಿಕಾರಿ ಡಾ.  ಎಂ.ಆರ್‌.ರವಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು. ಮುಂಬೈನಿಂದ ಬೆಂಗಳೂರು ಮಾರ್ಗವಾಗಿ ಶುಕ್ರವಾರ ರಾತ್ರಿ ಮಾರ್ಟಳ್ಳಿಯ ಪಾಲಿಮೇಡು ಗ್ರಾಮಕ್ಕೆ ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಬಂದಿದ್ದಾರೆ. ಇವರು ಮುಂಬೈನಲ್ಲೇ  ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಅದಕ್ಕೆ ಅಲ್ಲಿನ ಆಧಾರ್‌ ಕಾರ್ಡ್‌ ಸಾಕ್ಷಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾಹಿತಿ ನೀಡಿಲ್ಲ: ಇವರು ಜಿಲ್ಲೆಗೆ ಬರುವಾಗ ಸರ್ಕಾರದ ನಿಯಮದ ಪ್ರಕಾರ ಸೇವಾ ಸಿಂಧುವಿನಲ್ಲಿ ರಿಜಿಸ್ಟರ್‌ ಮಾಡಿ  ಕೊಳ್ಳ ಬೇಕು. ಹಾಗೆ ಮಾಡದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆಯಿಂದಲೂ ಜಿಲ್ಲೆಗೆ ಮಾಹಿತಿ ನೀಡಿಲ್ಲ. ಯುವಕನ  ಸೋದರಮಾವ ಮೂವರನ್ನೂ ಬೆಂಗಳೂರಿನಿಂದ ಶುಕ್ರವಾರ ಕರೆತಂದಿದ್ದಾರೆ. ಶುಕ್ರವಾರ ರಾತ್ರಿ ಯುವಕನ ತಾಯಿ ಮನೆ ಪಾಲಿಮೇಡು  ನಲ್ಲಿದ್ದು, ಶನಿವಾರ ಕೊಳ್ಳೇಗಾಲ ದ ಫೀವರ್‌ ಕ್ಲಿನಿಕ್‌ನಲ್ಲಿ ಪರೀಕ್ಷಿಸಿ ನಂತರ ಹನೂರಿನ  ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈ ನಲ್ಲಿರಿಸಲಾಗಿದೆ.

ಕೋವಿಡ್‌ ಪರೀಕ್ಷೆಯಲ್ಲಿ ತಾಯಿ ಮತ್ತು ಹಿರಿಯ ಮಗನಿಗೆ ನೆಗೆಟಿವ್‌ ಬಂದಿದ್ದು, 22 ವರ್ಷದ ಕಿರಿಯ ಪುತ್ರ  ನಿಗೆ ಪಾಸಿಟಿವ್‌ ದೃಢಪಟ್ಟಿದೆ. ಈತನಿಗೆ ಪ್ರಸ್ತುತ  ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದರು. ಯುವಕನ ತಾಯಿ, ತಮ್ಮ, ಮತ್ತು ಮಾವ ಪ್ರಾಥಮಿಕ ಸಂಪರ್ಕ ಹೊಂದಿದ್ದು ಇವರನ್ನು ಕ್ವಾರಂಟೈನ್‌  ಕೇಂದ್ರದಲ್ಲಿರಿಸ ಲಾಗಿದೆ. ಮಾವನ ಕುಟುಂಬದವರು ದ್ವಿತೀಯ ಸಂಪರ್ಕದವರಾಗಿದ್ದು, ಅವ ರನ್ನೂ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದರು. ಎಸ್ಪಿ ಆನಂದಕುಮಾರ್‌, ಡಿ ಎಚ್‌ಒ ಡಾ.ಎಂ.ಸಿ.ರವಿ ಇದ್ದರು.

ಚಾಮರಾಜನಗರ ಹಸಿರು ವಲಯ: ಬೇರೆ ರಾಜ್ಯದಿಂದ ಮತ್ತು ಹೊರ ದೇಶದಿಂದ ಜಿಲ್ಲೆಗೆ ಬಂದವರನ್ನು ಆ ಜಿಲ್ಲೆಗೆ ಸೇರಿದವರು ಎಂದು ಪರಿಣಿಸಲಾಗುವುದಿಲ್ಲ. ಯುವಕನ ತಾಯಿಗೆ ಮಧುಮೇಹ ಇದ್ದು, ಅವರನ್ನು ಮಾರ್ಟಳ್ಳಿಯಲ್ಲಿ  ಬಿಟ್ಟು ಹೋಗಲು ಬಂದಾಗ ಈ ಪ್ರಕರಣ ವರದಿಯಾಗಿದೆ. ಈ ಪ್ರಕರಣ ರಾಜ್ಯದ ಪಟ್ಟಿಯಲ್ಲಿ ಚಾಮರಾಜ ನಗರ ಜಿಲ್ಲೆಗೆ ಸೇರುವುದಿಲ್ಲ ಇತರ ವಿಭಾಗಕ್ಕೆ ಸೇರುತ್ತದೆ ಎಂದು ಜಿಲ್ಲಾ ಧಿಕಾರಿ ಡಾ.ರವಿ ಸ್ಪಷ್ಟಪಡಿಸಿದರು.

Advertisement

ಅಂತಾರಾಜ್ಯದಿಂದ  ಬರುವವರು ಸೇವಾ ಸಿಂಧು ದಾಖಲಾತಿ ಮಾಡಿಸಿ ನಂತರ ಬರಬೇಕು. ಆದರೆ ಇವರು ರಿಜಿಸ್ಟರ್‌ ಮಾಡಿಸದೇ ಬಂದದ್ದ ರಿಂದ ಈ ಅಚಾತುರ್ಯ ನಡೆದಿದೆ. ಯುವಕನಿಗೆ ಇಲ್ಲೇ ಚಿಕಿತ್ಸೆ ನೀಡಲಾ ಗುತ್ತಿದೆ. ಗುಣಮುಖನಾದ ಬಳಿಕ ಮುಂಬಯಿಗೆ  ಕಳುಹಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next