Advertisement

ಸುಶಾಂತ್ ಆತ್ಮಹತ್ಯೆ ಪ್ರಕರಣ: ಕಂಗನಾ ರಣಾವುತ್ ಗೆ ಮತ್ತೆ ಸಮನ್ಸ್ ನೀಡಿದ ಮುಂಬೈ ಪೊಲೀಸರು

02:29 PM Jul 23, 2020 | keerthan |

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿದ್ದು, ಈಗಾಗಲೇ ಹಲವರ ವಿಚಾರಣೆ ನಡೆಸಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವುತ್ ರಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಹೊಸ ಸಮನ್ಸ್ ನೀಡಿದ್ದಾರೆ.

Advertisement

ಕಳೆದ ಜುಲೈ 14ರಂದು ಸುಶಾಂತ್ ಬಾಂದ್ರಾದ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು. ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಸುಶಾಂತ್ ಗೆಳತಿ ರಿಯಾ ಸೇರಿದಂತೆ ಹಲವು ಒತ್ತಾಯಿಸಿದ್ದರು. ಬಾಲಿವುಡ್ ನಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತಕ್ಕೆ ಸುಶಾಂತ್ ಬಲಿಯಾಗಿದ್ದಾರೆ ಎಂದು ಕಂಗನಾ ರಣಾವುತ್ ಆರೋಪಿಸಿದ್ದರು.

ನಿರ್ದೇಶಕ ಕರಣ್ ಜೋಹರ್ ಸುಶಾಂತ್ ಗೆ ಅವಮಾನಿಸಿದ್ದರು. ಸುಶಾಂತ್ ಸಿನಿಮಾಗಳಿಗೆ ಥಿಯೇಟರ್ ಸಿಗದಂತೆ ಒಳಸಂಚು ಮಾಡಲಾಗಿತ್ತು. ಬಾಲಿವುಡ್ ನಲ್ಲಿ ನೆಪೊಟಿಸಂ ಜೋರಾಗಿದೆ ಎಂದು ಕಂಗನಾ ಆರೋಪಿಸಿದ್ದರು. ಈ ಕಾರಣದಿಂದ ಕಂಗನಾ ರ ವಿಚಾರಣೆ ಮಾಡಲು ಮುಂಬೈ ಪೊಲೀಸರು ನಿರ್ಧರಿಸಿದ್ದಾರೆ.

ಈ ಹಿಂದೆ ಕಂಗಾನರ ಮುಂಬೈ ನಿವಾಸಕ್ಕೆ ನೋಟಿಸ್ ನೀಡಿದಾಗ ಆಕೆ ಮನೆಯಲ್ಲಿ ಇರದ ಕಾರಣ ಉತ್ತರಿಸಿರಲಿಲ್ಲ. ನಂತರ ಕಂಗನಾ ಸೋದರಿ ರಂಗೋಲಿಗೆ ಪೊಲೀಸರು ಮಾಹಿತಿ ನೀಡಿದ್ದರು. ಕಂಗನಾ ತನ್ನ ತವರಾದ ಹಿಮಾಚಲ ಪ್ರದೇಶದಲ್ಲಿದ್ದಾರೆ. ಹೀಗಾಗಿ ಮುಂಬೈಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಮತ್ತೊಂದು ಸಮನ್ಸ್ ನೀಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next