Advertisement

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

12:56 AM Jun 17, 2024 | Team Udayavani |

ಮುಂಬಯಿ: ಉದ್ಯಮಿ ಎಲಾನ್‌ ಮಸ್ಕ್ ಇವಿಎಂಗಳನ್ನು ಹ್ಯಾಕ್‌ ಮಾಡಲು ಸಾಧ್ಯ ಎಂಬ ಹೇಳಿಕೆ ವಿವಾದಕ್ಕೆ ಕಾರಣ ಆಗಿರುವಂತೆಯೇ ಮುಂಬಯಿಯ ವಾಯವ್ಯ ಕ್ಷೇತ್ರದ ಸಂಸದ ರವೀಂದ್ರ ವಾಯ್ಕರ್‌ (ಶಿವಸೇನೆ ಶಿಂಧೆ ಬಣ) ಅವರ ಸಂಬಂಧಿ ಮಂಗೇಶ್‌ ಪಂಡೀಲ್ಕರ್‌ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚುನಾವಣೆ ಫ‌ಲಿತಾಂಶ ಪ್ರಕಟವಾದ ಜೂ. 4ರಂದು ಪಂಡೀಲ್ಕರ್‌ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ಗೆ ಬಂದ ಒಟಿಪಿ ಬಳಸಿ ಇವಿಎಂ ಅನ್ನು ತೆರೆದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಈ ಅಂಶ ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಂಬಯಿ ವಾಯವ್ಯ ಕ್ಷೇತ್ರದ ಫ‌ಲಿತಾಂಶಕ್ಕೆ ತಡೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಇದೇ ವೇಳೆ ಒಟಿಪಿ ಮೂಲಕ ಇವಿಎಂ ತೆರೆಯಲು ಸಾಧ್ಯವಿಲ್ಲ. ಇಂಥ ಆರೋಪಗಳು ಸತ್ಯಕ್ಕೆ ದೂರ ಎಂದು ಚುನಾವಣ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕೇಸು ದಾಖಲು
ಜೂ. 4ರಂದು ಮುಂಬಯಿ ವಾಯವ್ಯ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಮಂಗೇಶ್‌ ಪಂಡೀಲ್ಕರ್‌ ಮೊಬೈಲ್‌ ಸಹಿತ ಪ್ರವೇಶಿಸಿದ್ದರು, ಅವರು ಮೊಬೈಲ್‌ಗೆ ಬಂದ ಒಟಿಪಿ ಮೂಲಕ ಇವಿಎಂ ಅನ್ನು ತೆರೆ ದಿದ್ದರು ಎಂದು ಆರೋಪಿಸ ಲಾಗಿತ್ತು.

ಫ‌ಲಿತಾಂಶ ಪ್ರಕಟಗೊಂಡಾಗ ವಾಯ್ಕರ್‌ ಅವರು ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ ಅಮೋಲ್‌ ಕೀರ್ತಿಕರ್‌ ಅವರನ್ನು 48 ಮತಗಳ ಅಂತರದಿಂದ ಸೋಲಿಸಿದ್ದರು. ಈ ಫ‌ಲಿತಾಂಶದ ವಿರುದ್ಧ ಚುನಾವಣ ಆಯೋಗಕ್ಕೆ ಉದ್ಧವ್‌ ಬಣ ದೂರು ಸಲ್ಲಿಸಿರುವಂತೆಯೇ ಹೊಸ ಬೆಳವಣಿಗೆ ನಡೆದಿದೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ ಬಳಸಲು ಅನುಮತಿ ನೀಡಿದ ಚುನಾವಣ ಆಯೋಗದ ಸಿಬಂದಿಯೊಬ್ಬರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹ್ಯಾಕ್‌ ಅಸಾಧ್ಯ
ಹೊಸ ಆರೋಪಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಮುಂಬಯಿ ವಾಯವ್ಯ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ವಂದನಾ ಸೂರ್ಯವಂಶಿ, ಇವಿಎಂ ಗಳನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲ, ಅದನ್ನು ಮೊಬೈಲ್‌ ಒಟಿಪಿ ಮೂಲಕ ತೆರೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅದಕ್ಕೆ ವೈಫೈ ಸಂಪರ್ಕ ಸಾಧ್ಯವೂ ಇಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next