Advertisement

ಮುಂಬೈ ಮ್ಯಾರಥಾನ್‌: ಛಗನ್‌, ಕವಿತಾ ಚಾಂಪಿಯನ್ಸ್‌

10:47 PM Aug 21, 2022 | Team Udayavani |

ಮುಂಬಯಿ: ಮಹಾರಾಷ್ಟ್ರದ ಛಗನ್‌ ಬೊಂಬಾಲೆ ಮತ್ತು ಆಂಧ್ರ ಪ್ರದೇಶದ ಕವಿತಾ ರೆಡ್ಡಿ ರವಿವಾರ ನಡೆದ “ಮುಂಬೈ ಹಾಫ್ ಮ್ಯಾರಥಾನ್‌-2022″ರಲ್ಲಿ ಚಾಂಪಿಯನ್‌ ಆಗಿದ್ದಾರೆ.

Advertisement

ಬೆಳಗಿನ ಮೋಡ ಕವಿದ ವಾತಾ ವರಣದಲ್ಲಿ “ಬಾಂದ್ರಾ ಕುರ್ಲಾ’ ಕಾಂಪ್ಲೆಕ್ಸ್‌ನಲ್ಲಿ ಆರಂಭಗೊಂಡ 21ಕೆ ಮ್ಯಾರಥಾನ್‌ “ಜಿಯೋ ಗಾರ್ಡನ್ಸ್‌’ನಲ್ಲಿ ಕೊನೆಗೊಂಡಿತು. ಪುರುಷರ ವಿಭಾಗದಲ್ಲಿ ತೀವ್ರ ಪೈಪೋಟಿ ಕಂಡುಬಂತು. ಚಾಂಪಿ ಯನ್‌ ಛಗನ್‌ ಬೊಂಬಾಲೆ 1 ಗಂಟೆ, 16:11 ಸೆಕೆಂಡ್‌ಗಳಲ್ಲಿ ಈ ದೂರವನ್ನು ಕ್ರಮಿಸಿದರು.

ಭಗತ್‌ ಸಿಂಗ್‌ ವಲ್ವಿ ಒಂದೇ ನಿಮಿಷದಿಂದ ಹಿಂದುಳಿದರು (1:17:51 ಸೆಕೆಂಡ್ಸ್‌). ಅನಿಲ್‌ ಜಿಂದಲ್‌ ತೃತೀಯ ಸ್ಥಾನಿಯಾದರು (1:18:20 ಸೆಕೆಂಡ್ಸ್‌).

ವನಿತಾ ವಿಭಾಗದಲ್ಲಿ ಕವಿತಾ ರೆಡ್ಡಿಗೆ ಭಾರೀ ಸವಾಲು ಎದುರಾಗಲಿಲ್ಲ. ಅವರು 1 ಗಂಟೆ, 37.03 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ದ್ವಿತೀಯ ಸ್ಥಾನಿ ತನ್ಮಯಾ ಕರ್ಮಾಕರ್‌ ಇವರಿಗಿಂತ 3 ನಿಮಿಷಗಳಷ್ಟು ಹಿಂದಿದ್ದರು (1:40:18 ಸೆಕೆಂಡ್ಸ್‌). ಕೇತಕಿ ಸಾಠೆ ಮೂರನೇ ಸ್ಥಾನಿಯಾದರು (1:44.55 ಸೆಕೆಂಡ್ಸ್‌).

ತೆಂಡುಲ್ಕರ್‌ ಮುಖ್ಯ ಅತಿಥಿ
ಲೆಜೆಂಡ್ರಿ ಕ್ರಿಕೆಟಿಗ ಸಚಿನ್‌ ತೆಂಡು ಲ್ಕರ್‌ ಮ್ಯಾರಥಾನ್‌ಗೆ ಹಸುರು ನಿಶಾನೆ ನೀಡಿದರು. ಬಳಿಕ ವಿಜೇತರನ್ನು ಸಮ್ಮಾನಿಸಿದರು.

Advertisement

“ಕೊರೊನಾದಿಂದಾಗಿ ಕಳೆದೆರಡು ವರ್ಷ ಎಲ್ಲರ ಪಾಲಿಗೂ ಸವಾಲಿನ ದಿನಗಳಾಗಿದ್ದವು. ಅನಂತರ ಮುಂಬಯಿ ಯಲ್ಲಿ ಏರ್ಪಟ್ಟ ದೊಡ್ಡ ರೇಸ್‌ ಇದಾಗಿದೆ. ಇದರಲ್ಲಿ ಭಾಗಿಯಾದುದಕ್ಕೆ ಬಹಳ ಖುಷಿಯಾಗಿದೆ. ಮ್ಯಾರಥಾನ್‌ನಲ್ಲಿ ಪಾಲ್ಗೊಂಡವರಿಗೆಲ್ಲ ಅಭಿನಂದನೆಗಳು’ ಎಂದು ತೆಂಡುಲ್ಕರ್‌ ಹೇಳಿದರು.

ಎನ್‌ಇಬಿ ಸ್ಪೋರ್ಟ್ಸ್ ಆಯೋಜಿಸಿದ 3 ವಿಭಾಗಗಳ ಈ ಮ್ಯಾರಥಾನ್‌ನಲ್ಲಿ (ಹಾಫ್ ಮ್ಯಾರಥಾನ್‌, 10ಕೆ ಮತ್ತು 5ಕೆ) 13,500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next